ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದ ಇಬ್ಬರ ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸಿದ್ದಾರೆ.
ಬಸವೇಶ್ವರ ನಗರ ನಿವಾಸಿ ಸಂಪತ್ರಾಮ್ ಅಲಿಯಾಸ್ ಅಶೋಕಿ (23) ಹಾಗೂ ಶಂಕರಮಠದ ಪುರುಷೋತ್ತಮ ಅಲಿಯಾಸ್ ಬಿಲಾಲ್ (22) ವಿರುದಟಛಿ ನಗರದ ವಿವಿಧ ಠಾಣೆಗಳಲ್ಲಿ ದರೋಡೆ, ಡಕಾಯಿತಿ, ಹಲ್ಲೆ ಸೇರಿದಂತೆ ಪ್ರಕರಣಗಳು ದಾಖಲಾಗಿವೆ.
ಅಶೋಕಿ ವಿರುದ್ಧ18 ಹಾಗೂ ಬಿಲಾಲ್ ವಿರುದ್ಧ 14 ಪ್ರಕರಣಗಳಿದ್ದು ಇಬ್ಬರು ನಗರದಲ್ಲಿ 7 ವಾಹನಗಳಿಗೆ ಬೆಂಕಿ ಇಟ್ಟಿದ್ದರು. ಆರೋಪಿಗಳು ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಹೇರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
Advertisement