ಬೆನ್ನಿಗಿರಿದವರಿಗೇಕೆ ಮತ: ಮೋದಿ ಪ್ರಶ್ನೆ

ನಿಮ್ಮ ಜತೆ ನಾನು ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತೇನೆ. ಈ ಚುನಾವಣೆಯನ್ನು ದೆಹಲಿ ಮಾತ್ರ ನೋಡುತ್ತಿಲ್ಲ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ನವದೆಹಲಿ: ನಿಮ್ಮ ಜತೆ ನಾನು ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತೇನೆ. ಈ ಚುನಾವಣೆಯನ್ನು ದೆಹಲಿ ಮಾತ್ರ ನೋಡುತ್ತಿಲ್ಲ. ಇಡೀ ವಿಶ್ವವೇ ನೋಡುತ್ತಿದೆ ಎಂಬುದು ತಿಳಿದಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಆಪ್‍ಗೆ ಒಮ್ಮೆ ಅಧಿಕಾರ ಕೊಟ್ಟಿರಿ. ಆದರೆ ಅವರು ಜನರ ಬೆನ್ನಿಗೆ ಚೂರಿ ಹಾಕಿದರು ಎಂದು ಗುಡುಗಿದರು. ಇಂದು ಯಾರಾದರೂ ಪ್ರಧಾನಿ ಮೋದಿಯ ಕೈಯನ್ನು ಕುಲುಕಿ ಅವರ ಕಣ್ಣನ್ನು ದಿಟ್ಟಿಸಿದರೆ, ಅವರಿಗೆ ಕಾಣುವುದು ಮೋದಿಯಲ್ಲ.ಬದಲಾಗಿ ಭಾರತದ ಜನಸಾಮಾನ್ಯ ಎಂದು ಹೇಳಿದರು.

ಸೋತರೆ ಆಕ್ಸ್ ಫರ್ಡ್ ಹೋಗುವೆ: ಚುನಾವಣೆಯಲ್ಲಿ ಸೋತರೆ ಆಕ್ಸ್ ಫರ್ಡ್, ಹಾರ್ವರ್ಡ್, ಕೇಂಬ್ರಿಡ್ಜ್ ಅಥವಾ ಕೊಲಂಬಿಯಾ ವಿವಿಗಳಲ್ಲಿ ಉಪನ್ಯಾಸ ನೀಡಲು ತೆರಳುತ್ತೇನೆ ಎಂದು ಬಿಜೆಪಿ ದೆಹಲಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ.

ವಿಶ್ವಾಸ್ ವಿರುದ್ಧ  ದೂರು: ಬೇಡಿ ವಿರುದ್ಧ ಕಾಮಪ್ರಚೋದಕ ಮಾತುಗಳನ್ನಾಡಿದ್ದಕ್ಕಾಗಿ ಆಪ್ ನಾಯಕ ಕುಮಾರ್ ವಿಶ್ವಾಸ್ ವಿರುದ್ಧ ಶನಿವಾರ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com