ಗುವಾಹತಿ/ನಲ್ಬರಿ: ಅಸ್ಸಾಂ ನಲ್ಬರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ಯ ಯೋಧನೊಬ್ಬ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯೊಂಡಿದ್ದಾರೆ.
ಆರೋಪಿ ಮುಖ್ಯ ಪೊಲೀಸ್ ಪೇದೆ ಅಮಲ್ ಕೆ. ದಾಸ್ ತನ್ನ ಸರ್ವಿಸ್ ಗನ್ನಿಂದ ಸಹಾಯಕ ಸಬ್ ಇನ್ಸ್ಪೆಕ್ಟರ್ ಡಿ.ಸಿ.ಬಂಡೊಲಿ ಅವರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ಇತರೆ ಸಹೋದ್ಯೋಗಿಗಳ ಮೇಲೂ ದಾಸ್ ಗುಂಡು ಹಾರಿಸಿದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.
ಗಾಯಗೊಂಡ ಯೋಧರನ್ನು ನಲ್ಬರಿ ಆಸ್ಪತ್ರೆ ದಾಖಲಿಸಲಾಗಿದ್ದು, ಘಟನೆಯ ನಂತರ ದಾಸ್ ಸಹ ಆದೇ ಗನ್ನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಎಂದು ಸಿಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ಮಹಾರಾಷ್ಟ್ರದ ಮಹಾಲೇ ಜನಾರ್ದನ್, ಅಸ್ಸಾಂನ ದಿಗಂತೊ ಕೆ.ಬನ್ಯಾ, ಮುಖ್ಯ ಪೇದೆ, ದಯರಾಂ ಬಂಡೊಲಿಯಾ ಮತ್ತು ಎಎಸ್ಐ ನಿರ್ಮಲ್ ದಾಸ್ ಎಂದು ಗುರುತಿಸಲಾಗಿದೆ.
Advertisement