

ಹೈದರಾಬಾದ್: ಆಂಧ್ರ ಪ್ರದೇಶ ವಿಭಜನೆ ನಂತರ ತೆಲಂಗಾಣ ಮತ್ತು ಆಂದ್ರಪ್ರದೇಶಗಳಲ್ಲಿ ದೇವಾಲಯ ಅಭಿವೃದ್ಧಿ ಸಮರ ಆರಂಭವಾಗಿದೆ. ಕಳೆದ ವರ್ಷ ಆಂಧ್ರ ತೆಲಂಗಾಣವಾಗಿ ವಿಭಜನೆಯಾದ ನಂತರ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ, ಶ್ರೀಶೈಲಂನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಹಾಗೂ ಚಿತ್ತೂರಿನ ಕಾಳಹಸ್ತಿ ದೇವಾಲಯಗಳ ಉಸ್ತುವಾರಿಯನ್ನು ಚಂದ್ರಬಾಬು ನಾಯ್ಡು ಸರ್ಕಾರ ನೋಡಿಕೊಳ್ಳುತ್ತಿದೆ.
ತೆಲಂಗಾಣದಲ್ಲೂ ಹಲವು ದೇವಾಲಯಗಳಿದ್ದೂ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೊಳಿಸಿ ಭಕ್ತಾಧಿಗಳನ್ನು ಆಕರ್ಷಿಸಲು ಚಂದ್ರಶೇಖರ್ ರಾವ್ ಸರ್ಕಾರ ಮುಂದಾಗಿದೆ. ದೇಶದ ಅತೀ ಶ್ರೀಮಂತ ದೇವರು ಎನಿಸಿರುವ ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಮಾದರಿಯಲ್ಲೇ ಯಾದಗಿರಿಗುಟ್ಟದಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ನಿರ್ಮಿಸಲು ತೆಲಂಗಾಣ ಸರ್ಕಾರ ಯೋಜನೆ ಸಿದ್ಧ ಪಡಿಸಿದೆ.
ಕಳೆದ ವರ್ಷ ಯಾದಗಿರಿಗುಟ್ಟವನ್ನು ಪ್ರಸಿದ್ಧ ಯಾತ್ರಾ ಸ್ಥಳವಾಗಿ ಅಭಿವೃದ್ಧಿಗೊಳಿಸುವುದಾಗಿ ಕೆ. ಚಂದ್ರ ಶೇಖರ್ ರಾವ್ ಘೋಷಣೆ ಮಾಡಿದ ನಂತರ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯು ಹೆಚ್ಚಿದೆ. ಹೈದರಾಬಾದ್ ನಿಂದ ಕೇವಲ 50 ಕಿಮೀ ದೂರದಲ್ಲಿರುವ ಯಾದಗಿರಿಗುಟ್ಟಕ್ಕೆ ಬಸ್ ಮತ್ತು ರೈಲು ಸಂಚಾರ ಸೌಲಭ್ಯ ಹೇರಳವಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತಗಣ ಬರುವ ನಿರೀಕ್ಷೆ ಹೊಂದಲಾಗಿದೆ.
Advertisement