ನವದೆಹಲಿ: ಖಾಸಗಿ ಸುದ್ದಿವಾಹಿನಿಯೊಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸಂದರ್ಶನದ ವೇಳೆ ಕೇಳಿದ ಪ್ರಶ್ನೆಯೊಂದು ಸಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದಕ್ಕೆ ಸಾಕ್ಷಿಯಾಗಿದೆ.ದೆಹಲಿ ವಿವಿಯ ವಿದ್ಯಾರ್ಥಿಗಳು ಎದುರಿಸುತ್ತಿರುವಸಮಸ್ಯೆಗೆ ಸಂಬಂಧಿಸಿ ಸಿ ಆಜ್ ತಕ್ನ ``ಸ್ಮೃತಿ ಕೀ ಪರೀಕ್ಷಾ '' ಕಾರ್ಯಕ್ರಮದಲ್ಲಿ ಇರಾನಿ ಪಾಲ್ಗೊಂಡಿದ್ದಪು. . ಈ ವೇಳೆ ಆಜ್ ತಕ್ ನ ರಾಜಕೀಯ ಸಂಪಾದಕ ಅಶೋಕ್ ಸಿಂಘಾಲ್, ಪದವಿ ಪ್ರಮಾಣಪತ್ರ ವಿವಾದ, ಸಣ್ಣ ವಯಸ್ಸಿನ ಹೊರತಾಗಿಯೂ ನಿಮಗೆ ಎಚ್ಆರ್ಡಿಯಂಥ ಪ್ರಮುಖ ಖಾತೆ ನೀಡಲಾಗಿದೆ. ನಿಮ್ಮಲ್ಲಿ ಏನನ್ನು ನೋಡಿ ಮೋದಿ ಈ ಹೊಣೆಗಾರಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು.
Advertisement