ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಸಾಫ್ಟ್ ವೇರ್ ಇಂಜಿನಿಯರ್ ಮೇಲೆ ಗುಂಡು

ಬೈಕ್ ಡಿಕ್ಕಿ ಹೊಡೆದವನೊಂದಿಗೆ ಮಾತಿನ ಚಕಮಕಿ ನಡೆಸಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಗುಂಡೇಟು ತಿಂದ ಘಟನೆಯೊಂದು ದೆಹಲಿಯ ನೊಯ್ಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ...
ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಗುಂಡೇಟು ತಿಂದ ಸಾಫ್ಟ್ ವೇರ್ ಇಂಜಿನಿಯರ್ (ಸಾಂದರ್ಭಿಕ ಚಿತ್ರ)
ಡಿಕ್ಕಿ ಹೊಡೆದವನೊಂದಿಗೆ ವಾಗ್ವಾದ: ಗುಂಡೇಟು ತಿಂದ ಸಾಫ್ಟ್ ವೇರ್ ಇಂಜಿನಿಯರ್ (ಸಾಂದರ್ಭಿಕ ಚಿತ್ರ)
Updated on

ನೊಯ್ಡಾ: ಬೈಕ್ ಡಿಕ್ಕಿ ಹೊಡೆದವನೊಂದಿಗೆ ಮಾತಿನ ಚಕಮಕಿ ನಡೆಸಿದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಗುಂಡೇಟು ತಿಂದ ಘಟನೆಯೊಂದು ದೆಹಲಿಯ ನೊಯ್ಡಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಂದ್ರಪಾಲ್ ಹಾಗೂ ಪತ್ನಿ ಪಲ್ಲವಿ ಎಂಬುವವರು ಬೈಕ್ ನಲ್ಲಿ ನೊಯ್ಡಾದ ಸೆಕ್ಟರ್ 60 ರಸ್ತೆಯಲ್ಲಿ ಚಲಿಸುತ್ತಿದ್ದರು. ಈ ವೇಳೆ ಓವರ್ ಟೇಕ್ ಮಾಡಲು ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ರಸ್ತೆಯಲ್ಲಿ ಸರಿಯಾಗಿ ಹೋಗುವಂತೆ ಡಿಕ್ಕಿಹೊಡೆದ ವ್ಯಕ್ತಿಗೆ ಚಂದ್ರಪಾಲ್ ಸಲಹೆ ನೀಡಿದ್ದಾರೆ.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಬಳಿ ಇದ್ದ ಪಿಸ್ತೂಲನ್ನು ತೆಗೆದು ಚಂದ್ರಪಾಲ್ ಅವರ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಚಂದ್ರಪಾಲ್ ಅವರ ಪತ್ನಿ ನಂತರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಸ್ತುತ ಗಾಯಗೊಂಡಿರುವ ಚಂದ್ರಪಾಲ್ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com