ಪರೀಕ್ಷೆ ಬರೆದದ್ದಕ್ಕೆ ಅಪ್ರಾಪ್ತೆಯನ್ನು ಜೀವಂತ ಸುಟ್ಟರು

ಇಂಟರ್ ಮೀಡಿಯೆಟ್ ಪರೀಕ್ಷೆಗೆ ಹಾಜರಾದಳೆಂದ ದಲಿತ ಸಮುದಾಯದ 17 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಖನೌ: ಇಂಟರ್ ಮೀಡಿಯೆಟ್ ಪರೀಕ್ಷೆಗೆ ಹಾಜರಾದಳೆಂದ ದಲಿತ ಸಮುದಾಯದ 17 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ.

ಉತ್ತರ ಪ್ರದೇಶದ ಖುಷಿನಗರ ಜೆಲ್ಲೆಯ ಪತ್ಥಾರ್ ದೇವ ಗ್ರಾಮದ ದಿವಾನ್ ತೋಲ ಎಂಬ ಹಳ್ಳಿಯಲ್ಲಿ ಈ ಅಮಾನುಷ ಪ್ರಕರಣ ನಡೆದಿದೆ. ಈ ಸಂಬಂಧ ನಾಲ್ಕು ಜನರನ್ನು ಬಂಧಿಸಲಾಗಿದೆ.

ಧೀರಜ್ ಯಾದವ್, ಸಹೋದರರಾದ ಅರವಿಂದ್ ಮತ್ತು ದಿನೇಶ್ ಮತ್ತು ಅವರ ತಂದೆ ರಾಂ ಪ್ರವೇಶ್ ಯಾದವ್, ಗುಡಿಸಲಿನಲ್ಲಿ ಅಡುಗೆ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಹೊರಗೆಳೆದು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಕೊನೆಯುಸಿರೆಳೆಯುವ ಮುನ್ನ ವಿದ್ಯಾರ್ಥಿನಿ, ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

ಧೀರಜ್ ಸಹೋದರರು ಪ್ರತಿವರ್ಷ ಅನುತ್ತೀರ್ಣರಾಗುತ್ತಿದ್ದರು. ನನ್ನ ಮುಂದಿನ ವಿದ್ಯಾಭ್ಯಾಸ ಸಹಿಸದೇ ಪರೀಕ್ಷೆ ಹಾಜರಾಗದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ನನ್ನ ಫೋಟೋ ತೆಗೆದು, ಬ್ಲಾಕ್ ಮೇಲ್ ಮಾಡುತ್ತಿದ್ದರು. ಇದಕ್ಕೆ ಜಗ್ಗದ್ದಕ್ಕೆ ಬೆಂಕಿ ಹಚ್ಚಿದರು ಎಂದಿದ್ದಾಳೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com