ಕಾಯಕಲ್ಪ ಮಂಡಳಿಗೆ ರತನ್ ಟಾಟಾ ಮುಖ್ಯಸ್ಥ

ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮೇಲ್ದರ್ಜೆಗೆ ಏರಿಸಲು ಕಾಯಕಲ್ಪ ಮಂಡಳಿ ರಚಿಸಿದೆ ಕೇಂದ್ರ ಸರ್ಕಾರ. ರೈಲ್ವೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ...
ರತನ್ ಟಾಟಾ
ರತನ್ ಟಾಟಾ

ನವದೆಹಲಿ: ಭಾರತೀಯ ರೈಲ್ವೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮೇಲ್ದರ್ಜೆಗೆ ಏರಿಸಲು ಕಾಯಕಲ್ಪ ಮಂಡಳಿ ರಚಿಸಿದೆ ಕೇಂದ್ರ ಸರ್ಕಾರ. ರೈಲ್ವೆ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ ಅದನ್ನು ರಚಿಸಲಾಗಿದೆ ಎಂದು ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.

ಹೊಸ ಮಂಡಳಿಗೆ ಮುಖ್ಯಸ್ಥರನ್ನಾಗಿ ಟಾಟಾ ಸಮೂಹ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್ ಟಾಟಾರನ್ನು ನೇಮಿಸಲಾಗಿದೆ.

ಅವರ ಜತೆಗೆ ರೈಲ್ವೆ ಇಲಾಖೆ ಯೂನಿಯನ್ ಗಳ ಶಿವ್ ಗೋಪಾಲ್ ಮತ್ತು ಎಂ.ರಾಘವಯ್ಯ ಅವರು ಸದಸ್ಯರಾಗಲಿದ್ದಾರೆ. ಶಿಘ್ರದಲ್ಲಿ ಹೊಸ ಮಂಡಳಿಗೆ ಮತ್ತಷ್ಟು ಸದಸ್ಯರನ್ನು ನೇಮಿಸಲಾಗುತ್ತದೆ ಎಂದಿದ್ದಾರೆ ಸುರೇಶ್ ಪ್ರಭು.

ಈಗಾಗಲೇ ಹಲವು ಸಮಸ್ಯೆಗಳ ಸುಳಿಯಲ್ಲಿರುವ ರೈಲ್ವೆಯನ್ನು ಲಾಭದ ಹಳಿಗೆ ತರುವಲ್ಲಿ ಈ ಸಮಿತಿ ಸಲಹೆ ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com