ಮೋದಿ ದೇವಧೂತ, ರಾಹುಲ್ ಹುಚ್ಚ: ಮತ್ತೆ ವಿವಾದದಲ್ಲಿ ಸಾಕ್ಷಿ ಮಹಾರಾಜ್

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದ ಹುಟ್ಟುಹಾಕುತ್ತಲೇ ಇರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಹುಲ್ ಗಾಂಧಿ ಅವರನ್ನು 'ಹುಚ್ಚ' ಎನ್ನುವ ಮೂಲಕ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ...
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
Updated on

ಇಟಾ(ಉತ್ತರ ಪ್ರದೇಶ): ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ವಿವಾದ ಹುಟ್ಟುಹಾಕುತ್ತಲೇ ಇರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರಾಹುಲ್ ಗಾಂಧಿ ಅವರನ್ನು 'ಹುಚ್ಚ' ಎನ್ನುವ ಮೂಲಕ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ.

ಅಕಾಲಿಕ ಮಳೆ ಉಂಟುಮಾಡಿದ ಬೆಳೆ ನಾಶದಿಂದ ನೊಂದಿರುವ ರೈತರ ಸಮಸ್ಯೆ ಅರಿಯುವ ಸಲುವಾಗಿ ಪ್ರವಾಸ ಕೈಕೊಂಡಿರುವ ರಾಹುಲ್ ಗಾಂಧಿ ಕುರಿತಂತೆ ಮಾತನಾಡಿರುವ ಸಾಕ್ಷಿ ಮಹಾರಾಜ್, ರಾಹುಲ್ ಗೆ ತಲೆ ಸರಿಯಿಲ್ಲ. ಆತನೊಬ್ಬ ಹುಚ್ಚ, ಮೆಕ್ಕೆ ಜೋಳಕ್ಕೂ ಗೋಧಿಗೂ ವ್ಯತ್ಯಾಸ ತಿಳಿಯದ ವ್ಯಕ್ತಿಯೊಬ್ಬ ದೇಶದ ರೈತರ ಸಮಸ್ಯೆ ಅರಿಯಲು ಹೇಗೆ ಸಾಧ್ಯ. ರೈತರ ಸಮಸ್ಯೆ ಅರಿಯಲು ಸಾಂತ್ವನ ಹೇಳಲು ರಾಹುಲ್ ಪ್ರವಾಸ ಕೈಗೊಂಡಿರುವುದು ನಿಜವಾಗಿಯೂ ಹಾಸ್ಯಾಸ್ಪದ ಸಂಗತಿ ಎಂದು ವ್ಯಂಗ್ಯವಾಡಿದ್ದಾರೆ.

ರಾಜಕೀಯದ ರಂಗದ ಬಗ್ಗೆ ಇನ್ನೂ ಎಬಿಸಿಡಿಯನ್ನೂ ಕಲಿಯದ ರಾಹುಲ್ ರೈತರ ಸಮಸ್ಯೆ ಬಗ್ಗೆ ಹೇಗೆ ಮಾತನಾಡುತ್ತಾರೆ. ನಿಜವಾಗಿಯೂ ರಾಹುಲ್ ಗೆ ತಲೆ ಸರಿಯಿಲ್ಲ. ರಾಹುಲ್ ಒಬ್ಬ ಹುಚ್ಚ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೃಷ್ಟನಿಗೆ ಹೋಲಿಕೆ ಮಾಡಿರುವ ಸಾಕ್ಷಿ ಮಹಾರಾಜ್, ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುವ ವೇಳೆ ಆಪತ್ಭಾಂಧವನಂತೆ ಹೇಗೆ ಕೃಷ್ಣ ಬಂದು ವಸ್ತ್ರ ನೀಡುತ್ತಾನೆಯೋ, ಹಾಗೆ ನೇಪಾಳದ ನೆರೆ ಸಂತ್ರಸ್ಥರಿಗೆ ಮೋದಿ ಶ್ರೀಕೃಷ್ಣನಂತೆ ನೆರವಾದರು ಎಂದು ಸಾಕ್ಷಿ ಮಹಾರಾಜ್ ಪ್ರಧಾನಿ ಅವರನ್ನು ಹಾಡಿ ಹೊಗಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com