ರಾಯ್ಪುರ: ತನ್ನ ಅತ್ಯಾಚಾರ ಯತ್ನಕ್ಕೆ ಮಹಿಳೆಯೊಬ್ಬಳು ತೀವ್ರ ಪ್ರತಿರೋಧ ಒಡ್ಡಿದ ಪರಿಣಾಮ ಕಾಮುಕನೊಬ್ಬ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದು ತನ್ನ ಕೋಪ ತೀರಿಸಿಕೊಂಡ ಪ್ರಕರಣ ಛತ್ತೀಸ್ಗಡದಲ್ಲಿ ವರದಿಯಾಗಿದೆ.
ನಿನ್ನೆ ಇಲ್ಲಿನ ದುರ್ಗ ತಾಲ್ಲೂಕಿನಲ್ಲಿರುವ ಘುಸಿದಿಹ್ ಗ್ರಾಮದಲ್ಲಿ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಸಿದ ಮಹಾವೀರ್ ಎಂಬ ಆರೋಪಿ ಆಕೆ ಪ್ರತಿರೋಧ ಒಡ್ಡಿದ್ದಕ್ಕೆ ಇಬ್ಬರು ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ ಮೋಹನ್ (3), ಭುವನೇಶ್ವರಿ (6) ಎಂಬ ಮಕ್ಕಳನ್ನು ಕಾಮುಕ ಬೆಂಕಿ ಹಚ್ಚಿ ಕೊಂದಿದ್ದು, ಕಿರುಕುಳಕ್ಕೊಳಗಾದ ಮಹಿಳೆ ಆ ಮಕ್ಕಳಿಗೆ ಚಿಕ್ಕಮ್ಮ ಎಂದು ತಿಳಿದುಬಂದಿದೆ.
ಆರೋಪಿ ಕೂಡ ಅದೇ ಗ್ರಾಮದ ನಿವಾಸಿಯಾಗಿದ್ದು, ನಿನ್ನೆ ಮಧ್ಯಾಹ್ನ ಮನೆಗೆ ನುಗ್ಗಿ ಚಿಕ್ಕಮ್ಮನ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಾನೆ. ತನ್ನ ಪ್ರಯತ್ನ ವಿಫಲವಾದಾಗ ಕಾಮುಕ, ಮಕ್ಕಳ ಮೇಲೆ ಸೇಡು ತೀರಿಸಿಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
Advertisement