ಛೋಟಾ ರಾಜನ್ ಹಸ್ತಾಂತರ ಮುಂದೂಡಿಕೆ

ಕುಖ್ಯಾತ ಭೂಗತ ದೊರೆ ಛೋಟಾ ರಾಜನ್‍ನ ಹಸ್ತಾಂತರ ಪ್ರಕ್ರಿಯೆಯು ಹವಾಮಾನ ವೈಪರೀತ್ಯದ ಕಾರಣದಿಂದ...
ಛೋಟಾ ರಾಜನ್
ಛೋಟಾ ರಾಜನ್
Updated on
ಬಾಲಿ: ಕುಖ್ಯಾತ ಭೂಗತ ದೊರೆ ಛೋಟಾ ರಾಜನ್‍ನ ಹಸ್ತಾಂತರ ಪ್ರಕ್ರಿಯೆಯು ಹವಾಮಾನ ವೈಪರೀತ್ಯದ ಕಾರಣದಿಂದ ಮುಂದಕ್ಕೆ ಹೋಗಿದೆ. 
ಸನಿಹದಲ್ಲಿರುವ ಜ್ವಾಲಾಮುಖಿ ಪರ್ವತದಿಂದ ಎದ್ದ ಹೊಗೆಯಿಂದಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವೃತವಾಗಿದ್ದು, ನಿಲ್ದಾಣದ ಕಾರ್ಯಾಚರಣೆಯನ್ನು ಬಹುತೇಕ ಒಂದು ದಿನ ಮಟ್ಟಿದೆ ಮುಚ್ಚಲಾಗಿದೆ. 
ಗುರುವಾರ ಮುಂಜಾನೆವರೆಗೆ ಯಾವುದೇ ವಿಮಾನ ಹಾರಾಟ ನಡೆಯುವುದಿಲ್ಲವಾದ್ದರಿಂದ ಹಸ್ತಾಂತರ ಒಂದು ದಿನ ಮುಂದಕ್ಕೆ ಹಾಕಲಾಗಿದೆ. 
ಹಸ್ತಾಂತರದ ಬಳಿಕ ರಾಜನ್‍ನನ್ನು ಮುಂಬೈಯ ಕೇಂದ್ರ ಕಾರಾಗೃಹದಲ್ಲಿಡುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ನೀಡಿದೆ. ಜತೆಗೆ ಜೈಲಿನ ಸುತ್ತ ಅರೆಭದ್ರತಾ ಪಡೆಗಳನ್ನು ನಿಯೋಜಿಸಲು ಕೋರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com