ಆಂಧ್ರದತ್ತ ವಾಯುಭಾರ ಕುಸಿತ, ತಮಿಳುನಾಡು, ಚೆನ್ನೈಗೆ ರಿಲೀಫ್

ವಾಯುಭಾರ ಕುಸಿತ ಇದೀಗ ಈಶಾನ್ಯದತ್ತ ಸ್ಥಳಾಂತರಗೊಂಡಿದ್ದು, ಭಾರಿ ಮಳೆಯಿಂದ ತತ್ತರಿಸಿದ್ದ ಚೆನ್ನೈ ಹಾಗೂ ತಮಿಳುನಾಡು...
ಕೊಯೆಂಬೆಡು ಸಿಗ್ನಲ್ ನಲ್ಲಿ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವ್ಯಕ್ತಿ.
ಕೊಯೆಂಬೆಡು ಸಿಗ್ನಲ್ ನಲ್ಲಿ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವ್ಯಕ್ತಿ.
Updated on

ಚೆನ್ನೈ: ವಾಯುಭಾರ ಕುಸಿತ ಇದೀಗ ಈಶಾನ್ಯದತ್ತ ಸ್ಥಳಾಂತರಗೊಂಡಿದ್ದು, ಭಾರಿ ಮಳೆಯಿಂದ ತತ್ತರಿಸಿದ್ದ ಚೆನ್ನೈ ಹಾಗೂ ತಮಿಳುನಾಡು ಜನತೆ ನಿಟ್ಟೂಸಿರು ಬಿಡುವಂತಾಗಿದೆ.

ವಾಯು ಭಾರತ ಕುಸಿತದಿಂದಾಗಿ ನಿನ್ನೆ ಒಂದೇ ದಿನದಲ್ಲೇ ಸುಮಾರು 27 ಸೆಂ.ಮೀಟನಷ್ಟು ಮಳೆಯಾಗಿತ್ತು. ಅಲ್ಲದೆ ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಅಲೆಗಳು ಏಳಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಇದೀಗ ವಾಯು ಭಾರ ಕುಸಿತ ನಿಧಾನವಾಗಿ ಕಡಿಮೆಯಾಗುತ್ತಿದ್ದು, ಅದು ಆಂಧ್ರಪ್ರದೇಶದತ್ತ ಸ್ಥಳಾಂತರಗೊಳ್ಳುತ್ತಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಹೇಳಿದೆ.

ಭಾರಿ ಮಳೆಯಿಂದಾಗಿ ಚೆನ್ನೈನ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಬಸ್ ಹಾಗೂ ರೈಲು ಸಂಚಾರ ಸ್ಥಗಿತಗೊಂಡಿದೆ. ತಗ್ಗುಪ್ರದೇಶದಿಂದ ಸುಮಾರು 10ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ ನೆರೆಯ ಆಂಧ್ರಪ್ರದೇಶ ಕೂಡಾ ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com