ಕವಿ ಜಯಂತ್ ಮಹಾಪಾತ್ರ
ದೇಶ
ಪದ್ಮಶ್ರೀ ವಾಪಸ್ ನೀಡಿದ ಜಯಂತ್
ದೇಶದಲ್ಲಿ ಹೆಚ್ಚುತ್ತಿರುವ `ಮೌಲ್ಯಗಳ ಅಸಮಾನತೆ'ಯನ್ನು ವಿರೋಧಿಸಿ ಅಂತಾರಾಷ್ಟ್ರೀಯ ಖ್ಯಾತಿಯ...
ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ `ಮೌಲ್ಯಗಳ ಅಸಮಾನತೆ'ಯನ್ನು ವಿರೋಧಿಸಿ ಅಂತಾರಾಷ್ಟ್ರೀಯ ಖ್ಯಾತಿಯ ಕವಿ ಜಯಂತ್ ಮಹಾ ಪಾತ್ರ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿದ್ದಾರೆ.
ಪ್ರತಿಭಟನೆಯ ದಾರಿಯಾಗಿ ಈ ಪ್ರಶಸ್ತಿ ಹಿಂದಿರುಗಿಸುವುದಾಗಿ ರಾಷ್ಟ್ರಪತಿ ಪ್ರಣಬ್ ಅವರಿಗೆ ಪತ್ರ ರವಾನಿಸಿದ್ದೇನೆ. ದೇಶದಲ್ಲಿ ಅಧಿಕ ಗೊಳ್ಳುತ್ತಿರುವ ಮೌಲ್ಯಗಳ ಅಸಮಾನತೆ ವಿರೋಧಿಸಲು ದನಿ ಎತ್ತದಿದ್ದರೆನೈತಿಕವಾಗಿ ನಾನು ಸಣ್ಣವನಾಗುತ್ತೇನೆ. ನನ್ನದು ಅತಿ ಸಣ್ಣ ದನಿ.
ಆದರೆ ನಾನು ಮಾಡುತ್ತಿರುವುದು ಸರಿಯೆಂದು ಒಳದನಿ ಹೇಳುತ್ತಿದೆ. ಇದು ಯಾವುದೇ ರೀತಿಯಲ್ಲೂ ದೇಶವನ್ನು ಅಗೌರವಿಸಿದಂತಲ್ಲ ಎಂದು ಅವರು ಹೇಳಿದ್ದಾರೆ. 2009ರಲ್ಲಿ ಪದ್ಮಶ್ರೀ ಪಡೆದಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ