ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ರಾಷ್ಟ್ರ ಸಿಗಲ್ಲ: ಶಹನವಾಜ್ ಹುಸೇನ್

ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ದೇಶ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ...
ಶಹನವಾಜ್ ಹುಸೇನ್
ಶಹನವಾಜ್ ಹುಸೇನ್

ನವದೆಹಲಿ: ಮುಸ್ಲಿಂರಿಗೆ ಭಾರತಕ್ಕಿಂತ ಉತ್ತಮ ದೇಶ ಸಿಗಲು ಸಾಧ್ಯವೇ ಇಲ್ಲ ಎಂದು ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ಹೇಳಿದ್ದಾರೆ.

ಭಾರತ ಬಿಟ್ಟ ಬಳಿಕ ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನಿಸಿರುವ ಶಹನವಾಜ್ ಹುಸೇನ್, ಜಗತ್ತಿನಲ್ಲಿ ಎಲ್ಲೇ ಹೋದರೂ ನಿಮಗೆ ಅಸಹಿಷ್ಣುತೆ ಎದುರಾಗುತ್ತದೆ ಎಂದಿದ್ದಾರೆ.

ಆಮೀರ್ ಖಾನ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು. ಆದರೆ, ಅವರಿಗೆ ಪ್ರೀತಿ, ಗೌರವ ಮತ್ತು ಸಂಪತ್ತನ್ನು ನೀಡಿದ್ದು ಇದೇ ದೇಶ ಎಂಬುದು ನೆನಪಿನಲ್ಲಿರಲಿ. ಮುಸ್ಲಿಂರಿಗೆ ಭಾರತಕ್ಕಿಂತ ಒಳ್ಳೆಯ ದೇಶ ಸಿಗುವುದಿಲ್ಲ" ಎಂದು ಶಹನವಾಜ್ ಹುಸೇನ್ ತಿಳಿಹೇಳಿದ್ದಾರೆ.

ಭಾರತದಲ್ಲಿ ಅಸಹಿಷ್ಣುತೆಯ ವಾತಾವರಣ ಹೆಚ್ಚಾಗುತ್ತಿದೆ ಎಂದು ಹೇಳಿಕೆ ನೀಡಿದ್ದ ನಟ ಆಮೀರ್ ಖಾನ್ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com