ಅಸಹಿಷ್ಣುತೆ ಹೇಳಿಕೆ: ಅಮೀರ್ ಖಾನ್ ವಿರುದ್ಧ ರಾಷ್ಟ್ರದ್ರೋಹದ ಆರೋಪದ ಅಡಿ ಮೊಕದ್ದಮೆ ದಾಖಲು

ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಖಾನ್ ಪುರ ಸೆಷನ್ಸ್ ಕೋರ್ಟ್ ನಲ್ಲಿ ರಾಷ್ಟ್ರಧ್ರೋಹದ ಆರೋಪದ ಅಡಿ ಮೊಕದ್ದಮೆ ದಾಖಲಿಸಲಾಗಿದೆ.
ಅಮೀರ್ ಖಾನ್
ಅಮೀರ್ ಖಾನ್
Updated on

ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿದ್ದ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಖಾನ್ ಪುರ ಸೆಷನ್ಸ್ ಕೋರ್ಟ್ ನಲ್ಲಿ ರಾಷ್ಟ್ರದ್ರೋಹದ ಆರೋಪದ ಅಡಿ ಮೊಕದ್ದಮೆ ದಾಖಲಿಸಲಾಗಿದೆ.
ಅರ್ಜಿ ವಿಚಾರಣೆ ಡಿ.1 ಕ್ಕೆ ನಡೆಯಲಿದೆ. ಪ್ರಕರಣ ದಾಖಲಿಸಿರುವ ಅಡ್ವೊಕೇಟ್ ಮನೋಜ್ ಕುಮಾರ್ ದೀಕ್ಷಿತ್, ಅಮೀರ್ ಖಾನ್ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವುದು ರಾಷ್ಟ್ರದ್ರೋಹದ ಅಪರಾಧದ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದ್ದಾರೆ.  ಐಪಿಸಿ ಸೆಕ್ಷನ್ 124 (ಎ)(ರಾಷ್ಟ್ರ ಧ್ರೋಹ) 153 ಎ (ಎರಡು ಗುಂಪುಗಳ ನಡುವೆ ಧಾರ್ಮಿಕ ನೆಲೆಯಲ್ಲಿ ದ್ವೇಷ ಭಾವನೆ ಕೆರಳಿಸುವುದು) ರ ಅಡಿಯಲ್ಲಿ ಅಮೀರ್ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ಎಂಟು ತಿಂಗಳಿನಿಂದ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ಅಮೀರ್ ಖಾನ್ ಹೇಳಿಕೆ ನೀಡಿದ್ದರು. ಅಮೀರ್ ಖಾನ್ ಹೇಳಿಕೆಗೆ ಟೀಕೆ ಹಾಗೆಯೇ ಬೆಂಬಲವೂ ವ್ಯಕ್ತವಾಗುತ್ತಿದ್ದು, ಈಗ ಬಾಲಿವುಡ್ ನಟನ ವಿರುದ್ಧ ರಾಷ್ಟ್ರದ್ರೋಹದ ಆರೋಪದ ಅಡಿ ಮೊಕದ್ದಮೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com