ದೇವದಾಸಿ ಪದ್ಧತಿಗೆ ಕೊನೆ: ಉತ್ತರಿಸದ್ದಕ್ಕೆ ಸರ್ಕಾರಕ್ಕೆ 25 ಸಾವಿರ ದಂಡ

ನಮ್ಮ ದೇಶದಲ್ಲಿ ಇರುವ ಹಳೆಯ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ಬಲವಂತವಾಗಿ ತಳ್ಳುವುದನ್ನು ತಪ್ಪಿಸುವ ಕುರಿತು...
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
Updated on

ನವದೆಹಲಿ: ನಮ್ಮ ದೇಶದಲ್ಲಿ ಇರುವ ಹಳೆಯ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ಬಲವಂತವಾಗಿ ತಳ್ಳುವುದನ್ನು ತಪ್ಪಿಸುವ ಕುರಿತು ಸಮಯಕ್ಕೆ ಸರಿಯಾಗಿ ಅಫಿದವಿಟ್ಟು ಸಲ್ಲಿಸುವುದಕ್ಕೆ ವಿಫಲವಾಗಿರುವುದಕ್ಕೆ ಸುಪ್ರೀಂ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಸುಪ್ರೀಂ ಕೋರ್ಟ್ ನ ಮದನ್ ಬಿ ಲೋಕೂರ್ ಮತ್ತು ಯು.ಯು. ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸೆಪ್ಟೆಂಬರ್ 11ಕ್ಕೆ ಕೊ ನೆಯ ಬಾರಿಗೆ ಅವಕಾಶ ನೀಡಿದರೂ ಸಹ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿಲ್ಲ. ಆದುದರಿಂದ 25 ಸಾವಿರ ದಂಡ ಕಟ್ಟುವಂತೆ ಆದೇಶ ನೀಡಿದೆ. ಈ ಬಗ್ಗೆ ಏನಾದರೂ ಆಕ್ಷೇಪಗಳಿದ್ದಲ್ಲಿ ಉತ್ತರಿಸುವಂತೆ ನಾಲ್ಕು ವಾರಗಳ ಅವಕಾಶ ನೀಡಿದೆ.

ದೇವದಾಸಿ ಪದ್ಧತಿಯಿಂದ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಆ ಅನಿಷ್ಠ ಪದ್ಧತಿಯನ್ನು ಕಿತ್ತು ಹಾಕುವ ಬಗ್ಗೆ ಸಾಮೂಹಿಕವಾಗಿ ಅಫಿದವಿಟ್ಟು ಸಲ್ಲಿಸಲು ಕಳೆದ ಸೆಪ್ಟೆಂಬರ್ ನಲ್ಲಿ ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಸಮಯವನ್ನು ಮುಂದೂಡಲು ಸುಪ್ರೀಂ ಕೋರ್ಟ್ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಿತ್ತು. ಇದೀಗ ಅರ್ಜಿ ವಿಚಾರಣೆಯನ್ನು ಜನವರಿ 8ಕ್ಕೆ ನಿಗದಿಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com