ಲಖನೌ: ಆರ್ಎಸ್ಎಸ್ ನಾಯಕರು ಸಲಿಂಗಕಾಮಿಗಳು ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ಸಚಿವ ಅಜಂ ಖಾನ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ನಯಿ ದುನಿಯಾ ವರದಿಯ ಪ್ರಕಾರ, ಮುಂದುವರೆದ ಸಲಿಂಗಕಾಮ ವಿವಾದದ ಕುರಿತು ಹೇಳಿಕೆ ನೀಡುವಾಗ, ಆರ್ಎಸ್ಎಸ್ ನಾಯಕರು ಸಹ ಸಲಿಂಗಕಾಮಿಗಳು. ಹೀಗಾಗಿಯೇ ಅವರು ಮದುವೆಯಾಗುವುದಿಲ್ಲ ಎಂದು ಅಜಂ ಖಾನ್ ಹೇಳಿದರು.
ಇನ್ನು ಅಜಂ ಖಾನ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಆರ್ಎಸ್ಎಸ್, ಎಸ್ಪಿ ನಾಯಕ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ವಿಶ್ವ ಹಿಂದೂ ಪರಿಷತ್ ಸಹ ಅಜಂ ಖಾನ್ ಹೇಳಿಕೆಯನ್ನು ಖಂಡಿಸಿದೆ.
ಕಳೆದ ಶನಿವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಲಿಂಗಕಾಮದ ಕುರಿತು ತೀರ್ಪುನ್ನು ಸುಪ್ರೀಂ ಕೋರ್ಟ್ ಪುನರ್ ಪರಿಶೀಲಿಸಬೇಕು ಎಂದು ಹೇಳಿದ್ದರು.
Advertisement