ರಷ್ಯಾದ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಭೇಟಿ ಮಾಡುವ ಹಿನ್ನಲೆಯಲ್ಲಿ ಇಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಸೌರಿ ಅವರು, ಜಟಿಲ ವಿಷಯಗಳಲ್ಲಿ ಪ್ರಧಾನಿಗಳ ನಡುವಿನ ಮಾತುಕತೆಗೂ ಮೊದಲು ಹಿಂಬಾಗಿಲು ಚರ್ಚೆಗಳು ನಡೆಯಬೇಕು. ಕಾಶ್ಮೀರದ ವಿಷಯದಲ್ಲಿ ಈಗ 8 ವರ್ಷಗಳ ಹಿಂದೆ ಹಿಂಬಾಗಿಲ ಚರ್ಚೆಗಳು ನಡೆದಿದ್ದು, ಇಂತಹ ಚರ್ಚೆಯಿಂದ ಪಾಕ್ ಕಡೆ ವ್ಯಕ್ತವಾದ ನಿಲುವಿಗೆ ಅಂದಿನ ಸೇನಾ ಮುಖ್ಯಸ್ಥರು ಮತ್ತು ಐ.ಎಸ್.ಐ. ಮುಖ್ಯಸ್ಥರು ಸಮ್ಮತಿ ಸೂಚಿಸಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದರು.