ಪ್ರಧಾನಿ ನರೇಂದ್ರ ಮೋದಿ ಫೇಸ್ ಬುಕ್ ನಲ್ಲಿ ಚರ್ಚೆ ಕಡಿಮೆ ಮಾಡಿ ಮೈದಾನದಲ್ಲಿ ಹೆಚ್ಚು ಕೆಲಸ ಮಾಡಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡಿದ್ದಾರೆ.
ತಮ್ಮ ಪಕ್ಷದ ಮುಖಂಡರಿಗೆ ಸಲಹೆ ನೀಡಿ ಮೈತ್ರಿ ಪಕ್ಷಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವಂತೆ ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿರುವ ಅಖಿಲೇಶ್ ಪ್ರಧಾನಿ ಗೆ ತಿಳಿಸಿದ್ದಾರೆ.
ಇನ್ನು ದಾದ್ರಿ ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ ಘಟನೆ ಸಂಬಂಧ ಏಳು ಮಂದಿ ಸ್ಥಳೀಯ ಬಿಜೆಪಿ ಮುಖಂರನ್ನು ಬಂಧಿಸಲಾಗಿದೆ ಎಂದರು. ಗೋಮಾಂಸ ತಿನ್ನುವುದನ್ನು ನಾನು ವಯಕ್ತಿಕವಾಗಿ ವಿರೋಧಿಸುತ್ತೇನೆ.ಹಾಗಂತ ಗೋಮಾಂಸ ಉದ್ಯಮವನ್ನು ಮುಚ್ಚಿ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಪ್ರಪಂಚಾದ್ಯಂತ ಗೋಮಾಂಸ ಸೇವಿಸುವವರ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು, ನಾನು ಗೋಮಾಂಸ ತಿನ್ನುತ್ತೇನೆ ಎಂದು ಕೆಲ ಜನ ಹೇಳುತ್ತಾರೆ. ಹಾಗೆ ಹೇಳಿದ ಮಾತ್ರಕ್ಕೆ ನನ್ನನ್ನು ಕೊಲ್ಲುತ್ತಾರಾ..? ಇದು ಭಾರತೀಯ ಸಂಸ್ಕೃತಿಯಾ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
Advertisement