ಶ್ರೀನಗರ: ಪೆಟ್ರೋಲ್ ಬಾಂಬ್ನಿಂದ ಭಾಗಶಃ ಸುಟ್ಟು ಹೋಗಿದ್ದ ಟ್ರಕ್ ನಿರ್ವಾಹಕ ಭಾನುವಾರ ಮೃತಪಟ್ಟಿದ್ದು, ಕಾಶ್ಮೀರದ ಕೆಲ ಭಾಗಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಸಿಎಂ ಸಯೀದ್ ಈ ಸಾವಿಗೆ ಕೇಂದ್ರವನ್ನು ಹೊಣೆ ಮಾಡಿದ್ದು, ಪ್ರತ್ಯೇಕತಾವಾದಿಗಳು ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಗೋಮಾಂಸ ಸಾಗಿಸಲಾಗುತ್ತಿದೆ ಎಂಬ ಆರೋಪದಲ್ಲಿ ಉಧಂಪುರದಲ್ಲಿ ಟ್ರಕ್ಕೊಂದರ ಮೇಲೆ ತಂಡವೊಂದು ದಾಳಿ ನಡೆಸಿ ಪೆಟ್ರೋಲ್ ಬಾಂಬ್ ಪ್ರಯೋಗಿಸಿತ್ತು.
ಆ ಸಂದರ್ಭದಲ್ಲಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದ ನಿರ್ವಾಹಕ ಝಹೀದ್, ಭಾನುವಾರ ಮೃತಪಟ್ಟಿದ್ದರು. ಶವವನ್ನು ವಿಮಾನದಲ್ಲಿ ಶ್ರೀನಗ ರಕ್ಕೆ ಸಾಗಿಸಲಾಗಿದೆ. ಮರಣದ ಸುದ್ದಿ ತಲುಪಿ ಆತನ ಹುಟ್ಟೂರು ಬಟೆಂಗೂ ಸುತ್ತಮುತ್ತಲ ಪ್ರದೇಶ ಉದ್ವಿಗ್ನಗೊಂಡಿದೆ.
Advertisement