ಭ್ರಷ್ಟ ಪೊಲೀಸರನ್ನು ಹಿಡಿದುಕೊಟ್ಟರೆ 25 ಸಾವಿರ ಬಹುಮಾನ: ಬಿಎಸ್ ಬಸ್ಸಿ

ದೆಹಲಿಯ ಭ್ರಷ್ಟ ಪೊಲೀಸರ ಬಗ್ಗೆ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯ ನೀಡಿದರೆ 25 ಸಾವಿರ ರುಪಾಯಿ ಬಹುಮಾನ...
ಬಿಎಸ್ ಬಸ್ಸಿ
ಬಿಎಸ್ ಬಸ್ಸಿ

ನವದೆಹಲಿ: ದೆಹಲಿಯ ಭ್ರಷ್ಟ ಪೊಲೀಸರ ಬಗ್ಗೆ ಆಡಿಯೋ ಅಥವಾ ವಿಡಿಯೋ ಸಾಕ್ಷ್ಯ ನೀಡಿದರೆ 25 ಸಾವಿರ ರುಪಾಯಿ ಬಹುಮಾನ ನೀಡುವುದಾಗಿ ನಗರ ಪೊಲೀಸ್‌ ಆಯುಕ್ತ ಭೀಮಸೇನ ಬಸ್ಸಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೆಹಲಿ ಪೊಲೀಸರು ಅತಿ ಭ್ರಷ್ಟರು ಎಂದು ಶೇ.45ರಷ್ಟು ಜನ ಪ್ರತಿಕ್ರಿಯಿಸಿರುವದಾಗಿ ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ ಸಂಸ್ಥೆ ನಡೆಸಿದ ಸಮೀಕ್ಷೆ ತಿಳಿದುಬಂದಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದರು.

ದೆಹಲಿ ಸಿಎಂ ಆರೋಪಕ್ಕೆ ಈ ರೀತಿ ತಿರುಗೇಟು ನೀಡಿರುವ ಬಸ್ಸಿ, ಕೇಜ್ರಿವಾಲ್‌ ಬಿಡುಗಡೆ ಮಾಡಿದ ಸಮೀಕ್ಷೆಯ ಮಾನದಂಡ ತಮಗೆ ತಿಳಿದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ, ದೆಹಲಿ ಪೊಲೀಸ್‌ ಇಲಾಖೆಯನ್ನು ನಮಗೆ ಕೊಡಿ. ಮೊಂಡುಹಟ ಬಿಡಿ ಎಂದು ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪುನಃ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com