ಲೇಖಕರ ಪ್ರತಿಭಟನೆಗೆ ದನಿಗೂಡಿಸಿದ ಗುಲ್ಜಾರ್

ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ...
ಖ್ಯಾತ ಸಾಹಿತಿ ಮತ್ತು ಚಲನಚಿತ್ರ ಕರ್ಮಿ (ಸಂಗ್ರಹ ಚಿತ್ರ)
ಖ್ಯಾತ ಸಾಹಿತಿ ಮತ್ತು ಚಲನಚಿತ್ರ ಕರ್ಮಿ (ಸಂಗ್ರಹ ಚಿತ್ರ)

ಪಾಟ್ನಾ: ದೇಶದಲ್ಲಿ ಹೆಚ್ಚುತ್ತಿರುವ ಮತೀಯ ಅಸಹಿಷ್ಣುತೆಯ ವಿರುದ್ಧ ಸಮರ ಸಾರಿರುವ ಲೇಖಕರ ಜತೆಗೆ ಈಗ ಹಿಂದಿಯ ಜನಪ್ರಿಯ ಸಾಹಿತಿ ಗುಲ್ಜಾರ್ ದನಿಗೂಡಿಸಿದ್ದಾರೆ. ಒಬ್ಬ ಲೇಖಕನಿಗೆ  ಪ್ರತಿಭಟನೆ ದಾಖಲಿಸಲು ಇರುವ ಏಕೈಕ ಮಾರ್ಗವಿದು ಎಂದಿದ್ದಾರೆ.

ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಅಕಾಡೆಮಿಯ ಕೃತ್ಯವಲ್ಲ. ಆದರೆ ಎಲ್ಲೋ ಒಂದೆಡೆ ಅದರ ವಿರುದ್ಧ ಅಕಾಡೆಮಿ ಪ್ರತಿಭಟನೆ ದಾಖಲಿಸಬೇಕೆಂದು ಲೇಖಕರು ಬಯಸುತ್ತಾರೆ.  ನಮ್ಮೆಲ್ಲರನ್ನೂ ಕಲಕಿರುವ ಈ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರದ ತಪ್ಪೂ ಇದೆ. ಪ್ರಶಸ್ತಿ ವಾಪಸು ಮಾಡುವುದು ಪ್ರತಿಭಟನೆಯ ಒಂದು ವಿಧಾನ. ಬರಹಗಾರರಿಗೆ ಅದಲ್ಲದೆ ಬೇರೆ ದಾರಿಗಳಿಲ್ಲ  ಎಂದು ಗುಲ್ಜಾರ್ ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com