ಜಯಲಲಿತಾ ವಿರುದ್ಧ ಅವಹೇಳನಕಾರಿ ಸಾಹಿತ್ಯ: ತಮಿಳು ಜಾನಪದ ಗಾಯಕ ಅರೆಸ್ಟ್

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅವಹೇಳನಕಾರಿ ಸಾಹಿತ್ಯ ಬರೆದ ತಮಿಳು ಜಾನಪದ ಗಾಯಕನನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ...
ತಮಿಳುನಾಡು ಸಿಎಂ ಜಯಲಲಿತಾ ಮತ್ತು ಗಾಯಕ ಕೋವಾನ್
ತಮಿಳುನಾಡು ಸಿಎಂ ಜಯಲಲಿತಾ ಮತ್ತು ಗಾಯಕ ಕೋವಾನ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಅವಹೇಳನಕಾರಿ ಸಾಹಿತ್ಯ ಬರೆದ ತಮಿಳು ಜಾನಪದ ಗಾಯಕನನ್ನು ಸೈಬರ್ ಕ್ರೈಮ್  ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ತಿರುಚ್ಚಿಯಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಮಾರುತಂಡ ಕುರುಚಿ ಎಂಬ ಗ್ರಾಮದಲ್ಲಿ ವಾಸವಿದ್ದ ಜಾಮಪದ ಗಾಯಕ ಶಿವದಾಸ್ ಅಲಿಯಾಸ್ ಕೊವಾನ್ ಅವರನ್ನ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಬಂಧಿಸಿ, ವಿಚಾರಣೆಗಾಗಿ ಚೆನ್ನೈಗೆ ಕರೆತರಲಾಗಿದೆ.

ಗಾಯಕ ಕೋವನ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ರಾಜ್ಯಾದ್ಯಂತ ಅನೇಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸಲು ಸಜ್ಜಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 ತಮಿಳುನಾಡಿನಲ್ಲಿ ಸಾರಾಯಿ ಅಂಗಡಿಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಜಯಲಲಿತಾ ವಿರುದ್ಧ ಅವಹೇಳಕಾರಿ ಸಾಹಿತ್ಯ ಬರೆದು ಆನ್ ಲೈನ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com