ನರೇಂದ್ರ ಮೋದಿ, ಸಂವೇದಿಯಲ್ಲದ ಪ್ರಜ್ಞಾಹೀನ ವ್ಯಕ್ತಿ: ಲಾಲೂ ವ್ಯಂಗ್ಯ

ನರೇಂದ್ರ ಮೋದಿ ದೇಶ ಕಂಡ ಸೂಕ್ಷ್ಮ ಗ್ರಾಹಿಯಲ್ಲದ ಹಾಗೂ ಪ್ರಜ್ಞಾ ಹೀನ ವ್ಯಕ್ತಿ ಎಂದು ಲಾಲೂ ಪ್ರಸಾದ್ ಯಾದವ್ ಟೀಕಿಸಿದ್ದಾರೆ
ಲಾಲೂ ಪ್ರಸಾದ್ ಯಾದವ್ ಮತ್ತು ನರೇಂದ್ರ ಮೋದಿ
ಲಾಲೂ ಪ್ರಸಾದ್ ಯಾದವ್ ಮತ್ತು ನರೇಂದ್ರ ಮೋದಿ

ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವಾಗ್ದಾಳಿ ಮುಂದುವರೆಸಿದ್ದಾರೆ. ನರೇಂದ್ರ ಮೋದಿ ದೇಶ ಕಂಡ ಸೂಕ್ಷ್ಮ ಗ್ರಾಹಿಯಲ್ಲದ ಹಾಗೂ ಪ್ರಜ್ಞಾ ಹೀನ ವ್ಯಕ್ತಿ ಎಂದು ಅವರು ಟೀಕಿಸಿದ್ದಾರೆ.

ನರೇಂದ್ರ ಮೋದಿ ಹಗರಣಗಳ ದೊರೆ ಎಂದು ಟೀಕಿಸಿರುವ ಲಾಲೂ ಪ್ರಸಾದ್, ವಿವಿಧ ಹಗರಣಗಳಿಂದ ಬಂದ ಹಣವನ್ನು ತಂದು ಬಿಹಾರ ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ವಿದಾಯ ಹೇಳುವ ಸಮಯ ಬಂದಿದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಹಾರ ಚುನಾವಣಾ ಪ್ರಚಾರದಲ್ಲಿ ಲಾಲೂ ಪ್ರಸಾದ್ ಹೇಳಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ ಲಾಲೂ ಪ್ರಸಾದ್ ಯಾದವ್, ಅಮಿತ್ ಶಾ ಕೆಟ್ಟ ಹೇಳಿಕೆಗಳನ್ನು ನೀಡುವ ಮೂಲಕ ದೇಶದಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಮಿತ್ ಶಾ ಹೇಳಿಕೆಗಳನ್ನ ಕೇಳಿಸಿಕೊಳ್ಳದಷ್ಟು ಬಿಹಾರ ಜನ ಕಿವುಡರಾಗಿದ್ದಾರೆ ಎಂದು ಲಾಲೂ ವ್ಯಂಗ್ಯವಾಡಿದ್ದಾರೆ.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com