ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣ ಆಂಧ್ರ ಪ್ರದೇಶ ವಿಧಾನ ಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಪ್ರಶ್ನೋತ್ತರ ವೇಳೆ ಪ್ರತಿಪಕ್ಷ ವೈಎಸ್ ಆರ್ ಕಾಂಗ್ರೆಸ್ ಗದ್ದಲ ಆರಂಭಿಸಿತು.
ವಿಧಾನಸಭೆ ಸ್ಪೀಕರ್ ಕೆ. ಶಿವಪ್ರಸಾದ ರಾವ್ 2 ಬಾರಿ ಸದನವನ್ನು ಮುಂದೂಡಿದ್ರು. ವೈಎಸ್ ಆರ್ ಕಾಂಗ್ರೆಸ್ ಸದಸ್ಯರು ಪ್ರಕಣ ಸಂಬಂಧ ಚರ್ಚೆ ನಡೆಸುವಂತೆ ಸ್ಪೀಕರ್ ಗೆ ಮನವಿ ಮಾಡಿದರು. ಆದರೆ ಇದಕ್ಕೆ ಸ್ಪೀಕರ್ ಸಮ್ಮತಿಸಲಿಲ್ಲ. ವೈಎಸ್ ಆರ್ ಕಾಂಗ್ರೆಸ್ ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೀಗಾಗಿ ವಿಧಾನಸಭೆಯಲ್ಲಿ ತೀವ್ರ ಗದ್ದಲ- ಕೋಲಾಹಲ ಏರ್ಪಟ್ಟು ಕಲಾಪವನ್ನು ಮುಂದೂಡಲಾಯಿತು.
ಸರ್ಕಾರದ ಮುಖ್ಯ ಸಚೇತಕ ಕೆ. ಶ್ರೀನಿವಾಸಲು ಮಾತನಾಡಿ, ಈ ಪ್ರಕರಣ ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದ್ದಲ್ಲ, ಹೀಗಾಗಿ ಚರ್ಚೆಮಾಡಿ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ವಿಪಕ್ಷ ಸದಸ್ಯರು ಸದದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಶಣೆ ಕೂಗಿದರು. ಇದಾದ ನಂತರ ಸ್ಪೀಕರ್ ಸದನವನ್ನು ಮುಂದೂಡಿದರು.
Advertisement