ನಮಗೆ ಕುಂಟುನೆಪ ಬೇಡ, ನಿಜವಾದ ಒಆರ್‍ಒಪಿ ಬೇಕು: ನಿವೃತ್ತ ಯೋಧರು

ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಕ್ಕೆ ನಮ್ಮಿಂದ ಒಂದೇ ಒಂದು ಬೇಡಿಕೆ ಇದೆ. ಅದೇ ಒಆರ್‍ಒಪಿ ಯೋಜನೆ ಜಾರಿ. ನಮಗೆ ಸರ್ಕಾರದಿಂದ ಕುಂಟುನೆಪಗಳು ಬೇಡ. ನಿಜವಾದ ಒಆರ್‍ಒಪಿ ಯೋಜನೆ ಬೇಕು ಎಂದು ನಿವೃತ್ತ ಯೋಧರು ಶನಿವಾರ ಹೇಳಿದ್ದಾರೆ...
ಒಆರ್‍ಒಪಿ ಯೋಜನೆ ಜಾರಿ ಕೋರಿ ನಿವೃತ್ತ ಯೋಧರು  ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಚಿತ್ರ (ಫೋಟೋ ಕೃಪೆ: ಪಿಟಿಐ)
ಒಆರ್‍ಒಪಿ ಯೋಜನೆ ಜಾರಿ ಕೋರಿ ನಿವೃತ್ತ ಯೋಧರು ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಚಿತ್ರ (ಫೋಟೋ ಕೃಪೆ: ಪಿಟಿಐ)
Updated on

ನವದೆಹಲಿ: ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಕ್ಕೆ ನಮ್ಮಿಂದ ಒಂದೇ ಒಂದು ಬೇಡಿಕೆ ಇದೆ. ಅದೇ ಒಆರ್‍ಒಪಿ ಯೋಜನೆ ಜಾರಿ. ನಮಗೆ ಸರ್ಕಾರದಿಂದ ಕುಂಟುನೆಪಗಳು ಬೇಡ. ನಿಜವಾದ ಒಆರ್‍ಒಪಿ ಯೋಜನೆ ಬೇಕು ಎಂದು ನಿವೃತ್ತ ಯೋಧರು ಶನಿವಾರ ಹೇಳಿದ್ದಾರೆ.

ನಿವೃತ್ತ ಯೋಧರ ಬೇಡಿಕೆ ಈಡೇರಿಕೆ ಕೋರಿ ಇಂದು ನವದೆಹಲಿ ನಡೆಯುತ್ತಿರುವ ಗೌರವ್ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಸ್ತುತ ಜಾರಿ ಮಾಡಿರುವ ಒಆರ್‍ಒಪಿ ಯೋಜನೆಯಲ್ಲಿ ಹಲವು ನ್ಯೂನತೆಗಳಿದ್ದು, ನಮಗೆ ನಿಜವಾದ ಒಆರ್‍ಒಪಿ ಯೋಜನೆ ಜಾರಿಯಾಗಬೇಕಿದೆ. ಈ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿವೃತ್ತ ಯೋಧರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ಹೇಳಿದ್ದಾರೆ.

42 ವರ್ಷಗಳ ನಂತರ ನಮಗೆ ಇದೀಗ ಒಆರ್‍ಒಪಿ ಯೋಜನೆ ಜಾರಿಯಾಗಿದೆ. ಇದಕ್ಕೆ ನಮಗೆ ಸಂತೋಷವಿದೆ. ಪ್ರಧಾನಿಯವರಿಗೆ ನಾವು ಧನ್ಯವಾದವನ್ನೂ ಸಲ್ಲಿಸಿದ್ದೇವೆ. ಆದರೆ, ನ್ಯೂನತೆಗಳನ್ನೊಳಗೊಂಡಿರುವ ಒಆರ್‍ಒಪಿ ಯೋಜನೆಯನ್ನು ಹಿಂಪಡೆದು ನಿಜವಾದ ಒಆರ್‍ಒಪಿ ಯೋಜನೆ ಜಾರಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com