ವ್ರತಭಂಗ ಕಾರಣ: ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಶ್ರೀ ಗೈರು

ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ರಾಘವೇಶ್ವರ ಶ್ರೀ ನಿರ್ಧಾರಿಸಿದ್ದಾರೆ ಎಂದು ಬೆಂಗಳೂರಲ್ಲಿ ಮಠದ...
ರಾಘವೇಶ್ವರ ಸ್ವಾಮೀಜಿ
ರಾಘವೇಶ್ವರ ಸ್ವಾಮೀಜಿ
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ರಾಘವೇಶ್ವರ ಶ್ರೀ ನಿರ್ಧಾರಿಸಿದ್ದಾರೆ ಎಂದು ಬೆಂಗಳೂರಲ್ಲಿ ಮಠದ ಕಾರ್ಯದರ್ಶಿ ಡಾ.ಕೃಷ್ಣ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಬಂದರೆ ಶ್ರೀಗಳ ವ್ರತಭಂಗವಾಗುತ್ತೆ ಆ ಕಾರಣಕ್ಕೆ ಮೆಡಿಕಲ್ ಟೆಸ್ಟ್​ಗೆ ಶ್ರೀಗಳು ಬರುವುದಿಲ್ಲ ಎಂದು ರಾಘವೇಶ್ವರ ಸ್ವಾಮೀಜಿ ಪರ ಮಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 
ಚಾತುರ್ಮಾಸ ವ್ರತದಲ್ಲಿ ಶ್ರೀಗಳು 60 ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಿ ದೈಹಿಕವಾಗಿ ಬಳಲಿದ್ದಾರೆ ಈ ಹಿನ್ನೆಲೆ ರಾಘವೇಶ್ವರ ಶ್ರೀಗಳು ವಿಶ್ರಾಂತಿ ಪಡೆಯಲಿದ್ದಾರೆ ಎಂದಿದ್ದಾರೆ. 
ಈಗಾಗಲೇ ನಾವು ಕಾನೂನು ಸಲಹೆ ಪಡೆದುಕೊಂಡಿದ್ದೇವೆ ಎಂದಿರುವ ಅವರು, ಮುಂದಿನ ದಿನಗಳಲ್ಲಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ ಪಕ್ಷದಲ್ಲಿ ಮತ್ತೆ ಕಾನೂನು ಸಲಹೆ ಪಡೆದು ಪರೀಕ್ಷೆಗೆ ಹಾಜರಾಗುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com