ಮಹಾರಾಷ್ಟ್ರಕ್ಕೆ ಬಾ ನಿನ್ನ ಕುತ್ತಿಗೆ ಮೇಲೆ ಕತ್ತಿ ಇಡುತ್ತೇನೆ: ರಾಜ್ ಠಾಕ್ರೆ

ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ...
ರಾಜ್ ಠಾಕ್ರೆ ಮತ್ತು ಒವೈಸಿ (ಸಂಗ್ರಹ ಚಿತ್ರ)
ರಾಜ್ ಠಾಕ್ರೆ ಮತ್ತು ಒವೈಸಿ (ಸಂಗ್ರಹ ಚಿತ್ರ)
Updated on

ಮುಂಬೈ: ಭಾರತ ಮಾತಾ ಕೀ ಜೈ ವಿವಾದ ತಾರಕಕ್ಕೇರಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದ ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ  ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಬಿಜೆಪಿ, ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಶಿವಸೇನೆ ಮತ್ತು ಬಿಜೆಪಿ  ಪಕ್ಷಗಳು ಅಧಿಕಾರದ ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯ ಏಳ್ಗೆಯನ್ನೇ ಮರೆತುಬಿಟ್ಟಿವೆ ಎಂದು ಕಿಡಿಕಾರಿದರು. ಇದೇ ವೇಳೆ ಒವೈಸಿ ಸಹೋದರರ ವಿರುದ್ಧ ಕಿಡಿಕಾರಿದ ರಾಜ್ ಠಾಕ್ರೆ  ಒವೈಸಿ ಸಹೋದರರು ಬಿಜೆಪಿಯಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಅಂತೆಯೇ ಭಾರತ ಮಾತಾ ಕೀ ಜೈ ವಿವಾದ ಸಂಬಂಧ ಮಾತನಾಡಿದ ರಾಜ್ ಠಾಕ್ರೆ,  ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಹೇಳಿದರು.

ಈ ಹಿಂದೆ ಇದೇ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಒವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ನಾನು ಭಾರತ ಮಾತಾ ಕಿ ಜೈ  ಎನ್ನಲಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಒವೈಸಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com