ಕನ್ನಯ್ಯ, ಖಾಲಿದ್ ಗೆ ಜೀವ ಬೆದರಿಕೆ ಹಾಕಿದ್ದ ಇಬ್ಬರ ಬಂಧನ

ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್‌ ಹಾಗೂ ಉಮರ್ ಖಾಲಿದ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ...
ಕನ್ನಯ್ಯ ಕುಮಾರ್
ಕನ್ನಯ್ಯ ಕುಮಾರ್

ನವದೆಹಲಿ: ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್‌ ಹಾಗೂ ಉಮರ್ ಖಾಲಿದ್ ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕನ್ನಯ್ಯ ಹಾಗೂ ಖಲೀದ್ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಪತ್ರ, ರೈಫಲ್ ಗಳನ್ನು ಬಸ್ ನಲ್ಲಿಟ್ಟ ಆರೋಪದ ಮೇಲೆ ಸುಲಭ್ ಮತ್ತು ಸೌರಭ್ ಎಂಬುವರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ನವನಿರ್ಮಾಣ್ ಸೇನೆ ಮುಖ್ಯಸ್ಥ ಅಮಿತ್ ಜನಿ ಮುಖ್ಯ ಸಂಚುಕೋರನಾಗಿದ್ದು ಈ ಮೂವರು ಹೊಟೇಲ್ ನಲ್ಲಿ ಕುಳಿತು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com