ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!

ಬಹುಶಃ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಹುರಿಯತ್ ನ ಪ್ರತ್ಯೇಕತಾವಾದಿ ನಾಯಕರನ್ನು ಬದಿಗಿರಿಸಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!
ಮೊದಲ ಬಾರಿಗೆ ಪ್ರತ್ಯೇಕತಾವಾದಿಗಳನ್ನು ದೂರವಿಟ್ಟು ಭಾರತದೊಂದಿಗೆ ಮಾತುಕತೆ ನಡೆಸಿದ ಪಾಕ್!
Updated on

ನವದೆಹಲಿ: ಬಹುಶಃ  20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಹುರಿಯತ್ ನ ಪ್ರತ್ಯೇಕತಾವಾದಿ ನಾಯಕರನ್ನು ಬದಿಗಿರಿಸಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಏ.26 ರಂದು ನಡೆದ ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರತ್ಯೇಕತಾವಾದಿ ನಾಯಕರನ್ನು ದೂರವಿಟ್ಟಿದ್ದರ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಪ್ರತ್ಯೇಕತಾವಾದಿ ನಾಯಕ ಅಯಾಜ್ ಅಕ್ಬರ್, ಈ ಬಗ್ಗೆ ನೀವು ಪಾಕಿಸ್ತಾನದವರನ್ನೇ ಪ್ರಶ್ನಿಸಬೇಕು ಎಂದು ಹೇಳಿದ್ದಾರೆ.
ಪಾಕ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಭಾರತಕ್ಕೆ ಬಂದಿದ್ದರಾದರೂ, ಹುರಿಯತ್ ನಾಯಕರನ್ನು ಭೇಟಿಯಾಗಿಲ್ಲ. ಬಹುಶಃ  20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಘಟನೆ ನಡೆದಿದ್ದು, ಹುರೀಯತ್ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದ್ದೇ ಈ ಹಿಂದೆ ಭಾರತ- ಪಾಕ್ ನಡುವಿನ ಮಾತುಕತೆ ರದ್ದುಗೊಳ್ಳಲು ಕಾರಣ ಎಂದು ಹುರಿಯತ್ ನಾಯಕ ಅಯಾಜ್ ಅಕ್ಬರ್ ಹೇಳಿದ್ದಾರೆ.
ಹುರಿಯತ್ ಕಾನ್ಫರೆನ್ಸ್  ಭಾರತ-ಪಾಕಿಸ್ತಾನ ನಡುವಿನ ಮಾತುಕತೆ ನಡೆಯುವುದನ್ನು ವಿರೋಧಿಸುತ್ತಿಲ್ಲ. ಭಾರತ- ಪಾಕಿಸ್ತಾನದ ನಡುವೆ ಉತ್ತಮ ಬಾಂಧವ್ಯ ಇರಬಾರದು ಎಂದು ನಾವು ಹೇಳಿಲ್ಲ. ಆದರೆ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಕಾಶ್ಮೀರ ವಿವಾದ ಅಡ್ಡಿಯಾಗಿದ್ದು, ಕಾಶ್ಮೀರಿ ಜನತೆಯ ಆಕಾಂಕ್ಷೆಗಳಿಗೆ ಅನುಗುಣವಾಗಿ ವಿವಾದ ಬಗೆಹರಿಯಬೇಕು ಎಂದು ಅಯಾಜ್ ಅಕ್ಬರ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com