ದೆಹಲಿ: ಪಾದಚಾರಿಗೆ ಗುದ್ದಿ ಪರಾರಿಯಾಗಿದ್ದ ಮಿನಿ ಟ್ರಕ್ ಚಾಲಕನ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯ ಹರಿನಗರದಲ್ಲಿ ಪಾದಚಾರಿಗೆ ಗುದ್ದಿ ಪರಾರಿಯಾಗಿದ್ದ ಮಿನಿ ಟ್ರಕ್ ಚಾಲಕ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ...
ಚಾಲಕ ಬಂಧನ
ಚಾಲಕ ಬಂಧನ
Updated on
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಹರಿನಗರದಲ್ಲಿ ಪಾದಚಾರಿಗೆ ಗುದ್ದಿ ಪರಾರಿಯಾಗಿದ್ದ ಮಿನಿ ಟ್ರಕ್ ಚಾಲಕ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 
ಪಶ್ಚಿಮ ಬಂಗಾಳ ಮೂಲದ ಮಾತಿಬುಲ್ ಎಂಬುವರಿಗೆ ಡಿಕ್ಕಿ ಹೊಡೆದು ಆತನನ್ನು ಆಸ್ಪತ್ರೆಗೆ ದಾಖಲಿಸದೇ ಮಾನವೀಯತೆ ಮರೆತು ಪರಾರಿಯಾಗಿದ್ದ ಚಾಲಕ ರಾಜೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. 
ಮಾತಿಬುಲ್ ಅವರಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ರಾಜೇಶ್ ನನ್ನು ಬಂಧಿಸಲಾಗಿದೆ. ರಾಜೇಶ್ ದೆಹಲಿಯ ಉತ್ತಮ್ ನಗರದ ಮಹವೀರ್ ನಗರದಲ್ಲಿ ವಾಸವಾಗಿದ್ದ. ಅಪಘಾತ ನಂತರ ರಾಜೇಶ್ ತಲೆಮರೆಸಿಕೊಂಡಿದ್ದ.

ದೆಹಲಿ: ಪಾದಚಾರಿಗೆ ಟ್ರಕ್ ಡಿಕ್ಕಿ; ಸಾಯಲು ಬಿಟ್ಟು ಮೊಬೈಲ್ ಕದ್ದೊಯ್ದರು! - ವಿಡಿಯೋ
ನಿನ್ನೆ ಬೆಳಗ್ಗೆ 5 ಗಂಟೆ ಸುಮಾರಿಗೆ ಮಿನಿ ಟ್ರಕ್ ಮಾತಿಬಾಲ್ ರಿಗೆ ಡಿಕ್ಕಿ ಹೊಡೆದಿತ್ತು. ಸರಿಸುಮಾರು 1 ಗಂಟೆಗೂ ಹೆಚ್ಚು ಕಾಲ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಾತಿಬುಲ್ ಅವರು ಬಳಿಕ ಮೃತಪಟ್ಟಿದ್ದರು. ಈ ಸಂಪೂರ್ಣ ಚಿತ್ರಣ ಸುಭಾಶ್ ನಗರದ ಅಜಂತಾ ಸಿನಿಮಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com