ಶ್ರೀನಗರ: ಉಗ್ರರ ಕುಟುಂಬಸ್ಥರಿಗೆ ಕಿರುಕುಳ ನೀಡದಂತೆ ಜಮ್ಮು ಕಾಶ್ಮೀರ ಪೊಲೀಸರಿಗೆ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ ಜಾಕೀರ್ ರಶೀದ್ ಎಚ್ಚರಿಕೆ ನೀಡಿದ್ದಾನೆ.
ಒಂದು ನಿಮಿಷ 25 ಸೆಕಂಡ್ಸ್ ವಿಡಿಯೋ ಬಿಡುಗಡೆ ಮಾಡಿರುವ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಉಗ್ರರ ಕುಟುಂಬಗಳಿಗೆ ಕಿರುಕುಳ ನೀಡಿ ಪೊಲೀಸರು ದೊಡ್ಡ ತಪ್ಪು ಮಾಡಿದ್ದಾರೆ. ಇದಕ್ಕೆ ಪ್ರತೀಕಾರವನ್ನು ಅನುಭವಿಸಲೇಬೇಕು ಎಂದು ಆತ ಎಚ್ಚರಿಕೆ ನೀಡಿದ್ದಾನೆ.
ಯುದ್ದ ನಡೆಯುತ್ತಿರುವುದು ನಮ್ಮ ಮತ್ತು ನಿಮ್ಮ ಮಧ್ಯೆ, ಇದರಲ್ಲಿ ಕುಟುಂಬಸ್ಥರನ್ನು ಎಳೆದು ತರಬಾರದೆಂದು ಆತ ಆಗ್ರಹಿಸಿದ್ದಾನೆ. ಜುಲೈ 8 ರಂದು ಕಾಶ್ಮೀರದಲ್ಲಿ 21 ವರ್ಷದ ಉಗ್ರ ಬುಹ್ರಾನ್ ವನಿ ಯನ್ನು ಕೊಲ್ಲಲಾಗಿತ್ತು. ಇದಾದ ನಂತರ ಸುಮಾರು 4 ತಿಂಗಳ ಕಾಲ ಕಾಶ್ಮೀರದಲ್ಲಿ ಸುಮಾರು 94 ಮಂದಿಯನ್ನು ಕೊಲ್ಲಲಾಗಿತ್ತು. 13 ಸಾವಿರ ಮಂದಿ ಗಾಯಗೊಂಡಿದ್ದು, 8 ಸಾವಿರ ಮಂದಿಯನ್ನು ಬಂಧಿಸಲಾಗಿದೆ.
ಇದು ನಿಮ್ಮ ಮೊದಲ ತಪ್ಪು ಎಂದು ನಾನು ನಿಮ್ಮನ್ನು ಕ್ಷಮಿಸಿದ್ದೇನೆ. ಉಗ್ರರ ಕುಟುಂಬಸ್ಥರಿಗೆ ಕಿರುಕುಳ ಮುಂದುವರಿಸಿದರೇ ಅದನ್ನು ಸಹಿಸಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ.
Advertisement