'ಅಮ್ಮ'ನ ಸ್ಥಿತಿ ಗಂಭೀರ, ಅಮ್ಮ ಇನ್ನಿಲ್ಲ ಎಂಬ ಕೆಲ ಸುದ್ದಿವಾಹಿನಗಳ ವರದಿ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದ್ದು, ಹಿಂಸಾಚಾರ ಘಟನೆಗಳು ನಡೆಯಬಹುದು ಹಾಗೂ ಮುಂದಿನ ಕೆಲವು ದಿನಗಳ ಕಾಲ್ ತಮಿಳುನಾಡು ಬಂದ್ ಆಗಬಹುದು ಎಂಬ ಭಯದಿಂದ ಜನ ನಿಗದಿಗೂ ಮುನ್ನವೇ ಕಚೇರಿಯಿಂದ ಮನೆಗೆ ತೆರಳುತ್ತಿರುವುದು ಮತ್ತು ತಮ್ಮ ನಿತ್ಯದ ವಸ್ತುಗಳಿಗಾಗಿ ಅಂಗಡಿಗಳಿಗೆ ಧಾವಿಸುತ್ತಿರುವುದರಿಂದ ವಾಹನ ದಟ್ಟಣೆಗೆ ಕಾರಣ ಎನ್ನಲಾಗಿದೆ.