ಚರ್ಚಾ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಪಡೆದಿದ್ದ ಅರ್ನಬ್ ಗೋಸ್ವಾಮಿ ಅವರಿ ನವೆಂಬರ್ ತಿಂಗಳಲ್ಲಿ ಟೈಮ್ಸ್ ನೌ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ನಂತರ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳ ಕಾರ್ಯನಿರ್ವಹಣೆ ಬಗ್ಗೆ ಮಾತನಾಡಿದ್ದ ಅರ್ನಬ್ ಗೋಸ್ವಾಮಿ ಭಾರತೀಯ ಮಾಧ್ಯಮ ಜಗತ್ತಿನಲ್ಲಿ ಪಶ್ಚಿಮದ ಏಕಾಧಿಪತ್ಯ ಅಂತ್ಯಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಟೈಮ್ಸ್ ಸಮೂಹದ ಸುದ್ದಿವಾಹಿನಿಯಿಂದ ಹೊರಬಂದ ನಂತರ ಅರ್ನಬ್ ಗೋಸ್ವಾಮಿ ತಮ್ಮದೇ ಆದ ಹೊಸ ಚಾನಲ್ ನ್ನು ಪ್ರಾರಂಭಿಸುತ್ತಿದ್ದಾರೆ.