ನವದೆಹಲಿ: ಎರಡು ವಾರಗಳ ಹಿಂದೆ ಟೋಕಿಯೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಟೋಕಿಯೋದಲ್ಲಿ ಮೃತಪಟ್ಟ ಗೋಪಾಲ್ ರಾಮ್ ಪತ್ನಿ ಆರ್ಥಿಕವಾಗಿ ಬಲಹೀನರಾಗಿದ್ದು, ಟೋಕಿಯೋದಿಂದ ಶವ ವಾಪಸ್ ತರಲು ಸಹಾಯ ಮಾಡಬೇಕೆಂದು ಕಳೆದ ವಾರ ದೆಹಲಿ ಮಹಿಳಾ ಆಯೋಗ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿತ್ತು.
ಆಯೋಗದ ಮನವಿಗೆ ಸ್ಪಂದಿಸಿದ ಸುಷ್ಮಾ ಕೂಡಲೇ ಶವವನ್ನು ಭಾರತಕ್ಕೆ ತರಿಸಲು ಹಾಗೂ ಎಲ್ಲಾ ವೆಚ್ಚಗಳನ್ನು ಭರಿಸಲು ನಿರ್ದೇಶನ ನೀಡಿದ್ದರು. ಡಿಸೆಂಬರ್ 24 ರಂದು ಎಎನ್ಎ ವಿಮಾನದಲ್ಲಿ ಶವ ನವೆದಹಲಿಗೆ ತಲುಪಲಿದೆ ಎಂದು ಸುಷ್ಮಾ ಟ್ಟೀಟ್ ಮಾಡಿದ್ದಾರೆ.
Advertisement