ಟೋಕಿಯೋದಲ್ಲಿ ಮೃತಪಟ್ಟ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ : ಸುಷ್ಮಾ ಸ್ವರಾಜ್

ಎರಡು ವಾರಗಳ ಹಿಂದೆ ಟೋಕಿಯೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ..
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
Updated on

ನವದೆಹಲಿ: ಎರಡು ವಾರಗಳ ಹಿಂದೆ ಟೋಕಿಯೋದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ದೆಹಲಿ ವ್ಯಕ್ತಿಯ ಶವ ನಾಳೆ ಭಾರತಕ್ಕೆ ಬರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಟೋಕಿಯೋದಲ್ಲಿ ಮೃತಪಟ್ಟ  ಗೋಪಾಲ್ ರಾಮ್ ಪತ್ನಿ ಆರ್ಥಿಕವಾಗಿ ಬಲಹೀನರಾಗಿದ್ದು, ಟೋಕಿಯೋದಿಂದ ಶವ ವಾಪಸ್ ತರಲು ಸಹಾಯ ಮಾಡಬೇಕೆಂದು ಕಳೆದ ವಾರ ದೆಹಲಿ ಮಹಿಳಾ ಆಯೋಗ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿತ್ತು.

ಆಯೋಗದ ಮನವಿಗೆ ಸ್ಪಂದಿಸಿದ ಸುಷ್ಮಾ ಕೂಡಲೇ ಶವವನ್ನು ಭಾರತಕ್ಕೆ ತರಿಸಲು ಹಾಗೂ ಎಲ್ಲಾ ವೆಚ್ಚಗಳನ್ನು ಭರಿಸಲು ನಿರ್ದೇಶನ ನೀಡಿದ್ದರು. ಡಿಸೆಂಬರ್ 24 ರಂದು ಎಎನ್ಎ ವಿಮಾನದಲ್ಲಿ ಶವ ನವೆದಹಲಿಗೆ ತಲುಪಲಿದೆ ಎಂದು ಸುಷ್ಮಾ ಟ್ಟೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com