ಪಿಂಚಣಿಗೆ ಅರ್ಜಿ ಸಲ್ಲಿಸಿದ ಸುರೇಶ್ ರೈನಾ, ಗಬ್ಬರ್, ಕೈಲಾಶ್ ಖೆಹರ್

ಯಶ್ ಭಾರ್ತಿ ಪ್ರಶಸ್ತಿ ಪುರುಸ್ಕೃತರಿಗೆ ಉತ್ತರ ಪ್ರದೇಶ ಸರ್ಕಾರ ನೀಡುವ ಪಿಂಚಣಿ ಪಡೆಯಲು ಕ್ರಿಕೆಟಿಗ ಸುರೇಶ್ ರೈನಾ...
ಸುರೇಶ್ ರೈನಾ-ರಾಜ್ ಬಬ್ಬರ್- ಕೈಲಾಶ್ ಖೆಹರ್
ಸುರೇಶ್ ರೈನಾ-ರಾಜ್ ಬಬ್ಬರ್- ಕೈಲಾಶ್ ಖೆಹರ್
ಲಖನೌ: ಯಶ್ ಭಾರ್ತಿ ಪ್ರಶಸ್ತಿ ಪುರುಸ್ಕೃತರಿಗೆ ಉತ್ತರ ಪ್ರದೇಶ ಸರ್ಕಾರ ನೀಡುವ ಪಿಂಚಣಿ ಪಡೆಯಲು ಕ್ರಿಕೆಟಿಗ ಸುರೇಶ್ ರೈನಾ, ಮೊಹಮ್ಮದ್ ಕೈಫ್, ಹಿರಿಯ ನಟ ರಾಜ್ ಬಬ್ಬರ್, ಗಾಯಕ ಕೈಲಾಶ್ ಖೆಹರ್ ಸೇರಿದಂತೆ 100 ಮಂದಿ ಪ್ರಮುಖರು ಅರ್ಜಿ ಸಲ್ಲಿಸಿದ್ದಾರೆ. 
ಯಶ್ ಭಾರ್ತಿ ಪ್ರಶಸ್ತಿ ಪುರಸ್ಕೃತರಿಗೆ ತಿಂಗಳಿಗೆ ರು.50 ಸಾವಿರ ಪಿಂಚಣಿ ನೀಡುವುದಾಗಿ ಉತ್ತರ ಪ್ರದೇಶ ಸರ್ಕಾರ ಕಳೆದ ವರ್ಷ ಅಕ್ಟೋಬರ್ ನಲ್ಲಿ ಘೋಷಿಸಿತ್ತು. 
ಉತ್ತರ ಪ್ರದೇಶದಲ್ಲಿ ಒಟ್ಟು 141 ಮಂದಿ ಯಶ್ ಭಾರ್ತಿ ಪ್ರಶಸ್ತಿ ಪುರಸ್ಕೃತರಿದ್ದಾರೆ. ಇವರಲ್ಲಿ ಪಿಂಚಣಿಗಾಗಿ 108 ಮಂದಿ ಅರ್ಜಿ ಸಲ್ಲಿಸಿದ್ದಾರೆ. 
ಆದರೆ, ವಿರೋಧಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಾರ್ವಜನಿಕ ಹಣವನ್ನು ಈ ರೀತಿ ವ್ಯಯ ಮಾಡಬಾರದು ಎಂದು ಅಭಿಪ್ರಾಯಪಟ್ಟಿವೆ. 
ಪಿಂಚಣಿ ಯೋಜನೆ ಘೋಷಣೆಯಾಗುತ್ತಿದ್ದಂತೆ ಕಳೆದ ನವೆಂಬರ್ ನಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಪಿಂಚಣಿಯನ್ನು ನಿರಾಕರಿಸಿದ್ದರು.
ಪಿಂಚಣಿ ಹಣವನ್ನು ಒಳ್ಳೆ ಕೆಲಸಕ್ಕೆ ಬಳಸುವುದಾಗಿ ಗಾಯಕ ಕೈಲಾಶ್ ಖೆಹರ್ ಹೇಳಿದ್ದಾರೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಈ ರೀತಿ ಯೋಜನೆಯನ್ನು ಜಾರಿಗೆ ತಂದಿದೆ. ಇದನ್ನು ಸ್ವಾಗತಿಸುತ್ತೇವೆ ಎಂದು ಕೆಲ ಕಲಾವಿದರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com