ಹಿಂದೂ-ಮುಸ್ಲಿಂರಲ್ಲಿ ಒಡಕುಂಟು ಮಾಡುವುದು ಮೋದಿ ಚುನಾವಣಾ ತಂತ್ರ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
ರಾಹುಲ್ ಗಾಂಧಿ,
ರಾಹುಲ್ ಗಾಂಧಿ,
ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವಾಗ್ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಚುನಾವಣೆ ವೇಳೆ ಆರ್ಎಸ್ಎಸ್ ಜೊತೆ ವಿಷಪೂರಿತ ಪ್ರಚಾರ ಮಾಡುವ ಮೂಲಕ ಹಿಂದೂ-ಮುಸ್ಲಿಂರನ್ನು ಒಡೆಯುವುದು ಅವರ ಮುಖ್ಯ ಉದ್ದೇಶ ಎಂದು ಬುಧವಾರ ಆರೋಪಿಸಿದ್ದಾರೆ.
ಇಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆರ್ಎಸ್ಎಸ್ ಹಾಗೂ ಬಿಜೆಪಿ ಎರಡು ರೀತಿಯ ಪ್ರಚಾರವನ್ನು ಕೈಗೊಳ್ಳುತ್ತದೆ. ಒಂದು ವಿಕಾಸದ ಪ್ರಚಾರ ಮತ್ತೊಂದು ವಿಷಪೂರಿತ ಪ್ರಚಾರ ಎಂದು ಹೇಳಿದರು.
ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಿಂದೂ ಹಾಗೂ ಮುಸ್ಲಿಂರಲ್ಲಿ ಒಡಕನ್ನುಂಟು ಮಾಡುವ ಯತ್ನ ಮಾಡುತ್ತಾರೆ. ಬಿಹಾರ ಚುನಾವಣೆಯಾಗಲಿ, ಅಸ್ಸಾಂ, ಉತ್ತರ ಪ್ರದೇಶ ಚುನಾವಣೆಯಾಗಲಿ ಅವರು ಎಲ್ಲಿಗೆ ಹೋದರು ಎರಡು ರೀತಿಯ ಪ್ರಚಾರ ಮಾಡುತ್ತಾರೆ. ಒಂದು ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಪ್ರಚಾರ. ಇದು ಎಲ್ಲರ ಗಮನಕ್ಕೆ ಬರುತ್ತದೆ. ಆದರೆ ಮತ್ತೊಂದು ರಹಸ್ಯವಾಗಿ ನಡೆಸುವ ವಿಷಪೂರಿತ ಪ್ರಚಾರ ಯಾರ ಗಮನಕ್ಕೂ ಬರುವುದಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com