ಚುನಾವಣೆಯಲ್ಲಿ ಗೆಲ್ಲಲು ಮೋದಿ ಹಿಂದೂ ಹಾಗೂ ಮುಸ್ಲಿಂರಲ್ಲಿ ಒಡಕನ್ನುಂಟು ಮಾಡುವ ಯತ್ನ ಮಾಡುತ್ತಾರೆ. ಬಿಹಾರ ಚುನಾವಣೆಯಾಗಲಿ, ಅಸ್ಸಾಂ, ಉತ್ತರ ಪ್ರದೇಶ ಚುನಾವಣೆಯಾಗಲಿ ಅವರು ಎಲ್ಲಿಗೆ ಹೋದರು ಎರಡು ರೀತಿಯ ಪ್ರಚಾರ ಮಾಡುತ್ತಾರೆ. ಒಂದು ಅಭಿವೃದ್ಧಿ ಹೆಸರಿನಲ್ಲಿ ನಡೆಸುವ ಪ್ರಚಾರ. ಇದು ಎಲ್ಲರ ಗಮನಕ್ಕೆ ಬರುತ್ತದೆ. ಆದರೆ ಮತ್ತೊಂದು ರಹಸ್ಯವಾಗಿ ನಡೆಸುವ ವಿಷಪೂರಿತ ಪ್ರಚಾರ ಯಾರ ಗಮನಕ್ಕೂ ಬರುವುದಿಲ್ಲ ಎಂದರು.