ಚೆನ್ನೈ: ಕಾರು ರಿವರ್ಸ್ ತೆಗೆಯುವಾಗ ಬ್ರೇಕ್ ಬದಲಿಗೆ ಆಕ್ಸಲೇಟರ್ ಒತ್ತಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಕಳೆದ ರಾತ್ರಿ ಅಪಾರ್ಟ್ ಮೆಂಟ್ ನಿಂದ ಕಾರನ್ನು ಹಿಂದಕ್ಕೆ ತೆಗೆಯುವಾಗ ಬ್ರೇಕ್ ಬದಲಿಗೆ ಆಕ್ಸಲೇಟರ್ ಒತ್ತಿದ ಪರಿಣಾಮ ಕಾರಿನ ಹಿಂದೆ ನಿಂತಿದ್ದ ಗುಂಪಿನ ಮೇಲೆ ಕಾರು ಹರಿದಿದೆ. ತೀವ್ರವಾಗಿ ಗಾಯಗೊಂಡ ನಾಲ್ವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಬುಧವಾರ ಮೃತಪಟ್ಟಿದ್ದು, ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ನಲ್ಲಿ ನಾಲ್ವರು ಮಾತನಾಡುತ್ತಿದ್ದ ವೇಳೆ ಬ್ಯಾಂಕ್ ಮ್ಯಾನೆಜರ್ ಆಗಿರುವ ವೆಂಕಟೇಶ್ ಎಂಬುವರು ಈ ಅಪಘಾತ ಮಾಡಿದ್ದು, ವೆಂಕಟೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಅಬ್ದುಲ್ ರಹಮನ್ ಮತ್ತು ಪ್ಯಾರೆಲಾಲ್ ಎಂದು ಗುರುತಿಸಲಾಗಿದೆ.
Advertisement