ಘಟನೆ ಕುರಿತಂತೆ ಮಾತನಾಡಿರುವ ಅಧಿಕಾರಿಗಳು, ಪ್ರಕರಣದಲ್ಲಿ ಈಶ್ವರ್ ವಿವಾಹಿತನಾಗಿದ್ದನು ಎಂಬ ವಿಷಯ ಯುವತಿಗೆ ತಿಳಿದಿತ್ತೋ ಇಲ್ಲವೋ ಎಂಬುದು ಈವರೆಗೂ ತಿಳಿದುಬಂದಿಲ್ಲ. ಇದೀಗ ಹತ್ಯೆ ಮಾಡಿದ ರಾಜಸ್ತಾನ ಮೂಲದ ರಮೇಶ್ ಹಾಗೂ ಅನಿಲ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ 302 ಕೊಲೆ, 201 (ಸಾಕ್ಷ್ಯಾಧಾರ ನಾಶ) ಹಾಗೂ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಈಶ್ವರ ಅವರ ಮೃತ ದೇಹವನ್ನು ಆಹಮದಾಬಾದ್ ನಲ್ಲಿರುವ ಆತನ ತಂದೆಯವರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.