ಮೋದಿಗೆ ಉಗ್ರರ ಜೊತೆ ನಂಟಿದೆ: ಟಿಎಂಸಿ ಸಂಸದ ಇದ್ರಿಸ್ ಅಲಿ ಆರೋಪ

ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆಯ ಈ ಕಾರಣಕ್ಕಾಗಿಯೇ ಪಠಾಣ ಕೋಟ್ ಮೇಲೆ ದಾಳಿ ನಡೆದಿದೆ ಎಂದು...
ನರೇಂದ್ರ ಮೋದಿ
ನರೇಂದ್ರ ಮೋದಿ

ಕೊಲ್ಕೋತಾ: ಇಡಿ ದೇಶವೇ ಪಠಾಣ್ ಕೋಟ್ ದಾಳಿಯ ಬಗ್ಗೆ ಚಿಂತಿಸುತ್ತಿದ್ದರೇ, ತೃಣಮೂಲ ಸಂಸದ ಇದ್ರಿಸ್ ಅಲಿ, ಪ್ರದಾನಿ ನರೇಂದ್ರ ಮೋದಿ ಅವರ ಬಗ್ಗೆ  ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದಾರೆಯ ಈ ಕಾರಣಕ್ಕಾಗಿಯೇ ಪಠಾಣ ಕೋಟ್ ಮೇಲೆ ದಾಳಿ ನಡೆದಿದೆ ಎಂದು ಕೊಲ್ಕೋತ್ತಾದಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ನರೇಂದ್ರ ಮೋದಿ ಭೇಟಿ ನೀಡಿದ ನಂತರವೇ ಪಠಾಣ್ ಕೋಟ್ ಮೇಲೆ ದಾಳಿ ನಡೆದಿದೆ. ಹೀಗಾಗಿ ಮೋದಿಗೆ ಉಗ್ರರ ಜೊತೆ ನಂಟಿದೆ, ಇದು ನನ್ನ ವಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ,

ಇನ್ನೂ ಇದ್ರಿಸ್ ಅಲಿ ಹೇಳಿಕೆಯಿಂದ ಮುಜುಗರಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್, ಅಲಿ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ. ಇದೊಂದು ಬೇಜವಬ್ದಾರಿಯುತ ಹೇಳಿಕೆಯಾಗಿದ್ದು, ಈ ಸಂಬಂಧ ವಿವರಣೆ ಪಡೆಯುವುದಾಗಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com