ಬೆಂಗಳೂರಲ್ಲಿ ಕೆಲಸ ತಪ್ಪಿದ್ದಕ್ಕೆ ಬಿಎಂಪಿಗೆ 1.5 ಕೋಟಿ ಪರಿಹಾರ ಕೇಳಿದ

ವಾಣಿಜ್ಯ ನಗರದ ವಿಜಯ್ ಹಿಂಗ್ರೋಣಿ ಬೃಹತ್ ಮುಂಬೈ ಪಾಲಿಕೆ ವಿರುದ್ಧ ರು. 1.5 ಕೋಟಿ ಪರಿಹಾರ ಕೊಡಬೇಕೆಂದು ಕೇಸು ಹಾಕಿದ್ದಾರೆ...
ವಿಜಯ್ ಹಿಂಗ್ರೋಣಿ
ವಿಜಯ್ ಹಿಂಗ್ರೋಣಿ
Updated on

ಮುಂಬೈ: ವಾಣಿಜ್ಯ ನಗರದ ವಿಜಯ್ ಹಿಂಗ್ರೋಣಿ ಬೃಹತ್ ಮುಂಬೈ ಪಾಲಿಕೆ ವಿರುದ್ಧ ರು. 1.5 ಕೋಟಿ ಪರಿಹಾರ ಕೊಡಬೇಕೆಂದು ಕೇಸು ಹಾಕಿದ್ದಾರೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಅವರಿಗೆ ಬಿಸಿನೆಸ್ ಅನಲಿಸ್ಟ್ ಆಗಿ ಕೆಲಸ ಸಿಕ್ಕಿತ್ತು. ಇದೇ ಸಂಭ್ರಮದಲ್ಲಿ ಅವರು ಬೆಂಗಳೂರಿಗೆ ಬರಲೆಂದು ಮುಂಬೈನ ಕಾರ್ಟೆರ್ ರಸ್ತೆಯಲ್ಲಿ ಆಗಮಿಸುತ್ತಿದ್ದಾಗ ತೆರದಿದ್ದ ಮ್ಯಾನ್ ಹೋಲ್ ಗೆ ಬಿದ್ದರು. ಪರಿಣಾಮ ಅವರ ಕಾಲು ಮುರಿಯಿತು. ಹೀಗಾಗಿ ಅವರಿಗೆ ನಿಗದಿತ ಅವಧಿಯಲ್ಲಿ ಕೆಲಸಕ್ಕೆ ಸೇರಲು ಆಗಲಿಲ್ಲ. ಇದರಿಂದಾಗಿ ಅವರಿಗೆ ತಿಂಗಳಿಗೆ ರು. 2.5 ಲಕ್ಷ ವೇತನದ ಉದ್ಯೋಗ ತಪ್ಪಿ ಹೋಯಿತು. ಇದರಿಂದ ಕ್ರುದ್ಧಗೊಂಡ ಅವರು ಪಾಲಿಕೆ ವಿರುದ್ಧ ಕೇಸು ದಾಖಲಿಸಿದ್ದಾರೆ. ನನ್ನ ದುಸ್ಥಿತಿಗೆ ಪಾಲಿಕೆಯೇ ಕಾರಣ ಎಂದಿರುವ ಅವರು, ಪಾಲಿಕೆಯಿಂದ ರು. 1.5 ಕೋಟಿ ಪರಿಹಾರ ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com