ಪುರುಷರಿಗೆಲ್ಲಿದೆ ರಕ್ಷಣೆ?

ಅತ್ಯಾಚಾರ ಆರೋಪವೊಂದರಲ್ಲಿ ವಕೀಲರೊಬ್ಬರನ್ನು ಸೋಮವಾರ ನಿರ್ದೋಷಿ ಎಂದು ಖುಲಾಸೆಗೊಳಿಸಿದ ದೆಹಲಿ ಸ್ಥಳೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅತ್ಯಾಚಾರ ಆರೋಪವೊಂದರಲ್ಲಿ ವಕೀಲರೊಬ್ಬರನ್ನು ಸೋಮವಾರ ನಿರ್ದೋಷಿ ಎಂದು ಖುಲಾಸೆಗೊಳಿಸಿದ ದೆಹಲಿ ಸ್ಥಳೀಯ ಕೋರ್ಟ್, ``ಸುಳ್ಳು ಆರೋಪಗಳಿಂದ ಪುರುಷರ ನ್ನು ರಕ್ಷಿಸುವ ಸಂಬಂಧ ಕಾನೂನು ರೂಪಿಸಲು ಇದು ಸೂಕ್ತ ಸಯಮ,'' ಎಂದು ಅಭಿಪ್ರಾಯ ಪಟ್ಟಿದೆ. 
ಅಲ್ಲದೆ, ಸುಳ್ಳು ಪ್ರಕರಣ ದಾಖಲಿಸಿದ ಕಾರಣಕ್ಕೆ ದೂರುದಾರ ಮಹಿಳೆ ವಿರುದ್ಧ ಮಾನ ಹಾನಿ ಕೇಸು ದಾಖಲಿಸಲು ಕೋರ್ಟ್ ಅವಕಾಶ ಕಲ್ಪಿಸಿದೆ. 
``ತನ್ನ ಮೇಲೆ 2010-12ರ ಅವಧಿಯಲ್ಲಿ ವಕೀಲನಿಂದ, ಅವರ ಕಚೇರಿಯಲ್ಲೇ ಪದೇ ಪದೆ ಅತ್ಯಾಚಾರ ಮಾಡಲಾಗಿದೆ,'' ಎಂದು ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಆದರೆ, ಅವರು ಪ್ರಕರಣ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com