ಕಾಶಿ ಮಠಾಧೀಶ ಸುಧೀಂದ್ರ ತೀರ್ಥ ಸ್ವಾಮೀಜಿ ಇನ್ನಿಲ್ಲ

ಗೌಡ ಸಾರಸ್ವತ ಸಮಾಜದ ಸ್ವಾಮೀಜಿ, ಕಾಶಿ ಮಠಾಧೀಶ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿ(91) ಭಾನುವಾರ ನಸುಕಿನ...
ಸುಧೀಂದ್ರ ತೀರ್ಥ ಸ್ವಾಮೀಜಿ
ಸುಧೀಂದ್ರ ತೀರ್ಥ ಸ್ವಾಮೀಜಿ
ಮಂಗಳೂರು: ಗೌಡ ಸಾರಸ್ವತ ಸಮಾಜದ ಸ್ವಾಮೀಜಿ, ಕಾಶಿ ಮಠಾಧೀಶ ಶ್ರೀಸುಧೀಂದ್ರ ತೀರ್ಥ ಸ್ವಾಮೀಜಿ(91) ಭಾನುವಾರ ನಸುಕಿನ ಜಾವ ಹರಿದ್ವಾರದಲ್ಲಿ ಇಹಲೋಕ ತ್ಯಜಿಸಿದರು. 
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳ ಇಚ್ಛೆಯಂತೆ ಕೊನೆಯ ದಿನಗಳನ್ನು ಕಳೆಯಲು ಅವರನ್ನು ಹರಿದ್ವಾರದ ಆಶ್ರಮಕ್ಕೆ ಶುಕ್ರವಾರ ಏರ್‍ಆಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿತ್ತು. 
ಅಲ್ಲಿ ಬೆ. 1.10ಕ್ಕೆ ಕೊನೆಯುಸಿರೆಳೆದರು. ಅವರ ಅಂತ್ಯ ಕ್ರಿಯಯನ್ನು ಭಾನುವಾರ ಸಂಜೆ ಹರಿ ದ್ವಾರದಲ್ಲಿ ನಡೆಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com