ಸ್ಮೃತಿ ಇರಾನಿ ದೇಹ ಮುಚ್ಚಲು ಜವಳಿ ಖಾತೆ ಸಹಾಯವಾಗುತ್ತದೆ: ಜೆಡಿಯು ಮುಖಂಡ ಅನ್ವರ್ ಅಲಿ

ಸ್ಮತಿ ಇರಾನಿ ಅವರಿಗೆ ಜವಳಿ ಖಾತೆ ನೀಡಿರುವುದು ಒಳ್ಳೆಯದ್ದೇ ಆಯಿತು. ಇದರಿಂದ ಅವರ ಮೈಮುಚ್ಚಲು ಸಹಾಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆಂದು..
ಸ್ಮತಿ ಇರಾನಿ
ಸ್ಮತಿ ಇರಾನಿ
Updated on

ನವದೆಹಲಿ; ರಾಜ್ಯ ಸಭೆ ಸದಸ್ಯೆ ಸ್ಮೃತಿ ಇರಾನಿ ಅವರಿಗೆ ಮಾನವ ಸಂಪನ್ಮೂಲ ಖಾತೆಯಿಂದ ಕಡಿಮೆ ದರ್ಜೆಯ ಜವಳಿ ಖಾತೆ ನೀಡಿರುವುದಕ್ಕೆ ಹಲವು ಟೀಕೆಗಳು ಬಂದ ಬೆನ್ನಲ್ಲೇ ಜೆಡಿಯ ಮುಖಂಡ ಅನ್ವರ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸ್ಮತಿ ಇರಾನಿ ಅವರಿಗೆ ಜವಳಿ ಖಾತೆ ನೀಡಿರುವುದು ಒಳ್ಳೆಯದ್ದೇ ಆಯಿತು. ಇದರಿಂದ ಅವರ ಮೈಮುಚ್ಚಲು ಸಹಾಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆಂದು ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ.

ಅನ್ವರ್ ಅಲಿ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಬದಲಾಯಿಸಿರುವ ಅಲಿ, ನಾನು ಹೇಳಿದ್ದು, ಇರಾನಿ ಅವರಿಗಲ್ಲ ಜನರ ದೇಹ ಮುಚ್ಚಲು ಸಹಾಯವಾಗುತ್ತದೆ ಎಂಬ ರೀತಿಯಲ್ಲಿ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜನತಾದಳ (ಯು) ನಾಯಕ ಅಲಿ ಅನ್ವರ್ ಅವರು ಸ್ಮೃತಿ ಇರಾನಿ ಬಗ್ಗೆ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿದ ಜಾವಡೇಕರ್, ‘ಇದು ನಾನು ಕೇಳಿದ ಅತ್ಯಂತ ಕೆಟ್ಟ ಟೀಕೆ’ ಎಂದು ಟಾಂಗ್ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com