ನೆರೆ, ಪ್ರವಾಹದ ಕಾರಣದಿಂದಾಗಿ ಭೋಪಾಲ್-ಬರೇಲಿ ಮತ್ತು ರೈಸನ್-ವಿದಿಶಾ ರಸ್ತೆಗಳು ಮುಚ್ಚಿಹೋಗಿವೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಬರಗಾಲ ಕ್ರಿಯಾ ತಂಡದ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿ, ಪ್ರವಾಹದಿಂದಾಗಿ ಎಲ್ಲಿ, ಎಷ್ಟು ಹಾನಿಯಾಗಿವೆ ಎಂದು ಸಮೀಕ್ಷೆ ನಡೆಸಲು ಆದೇಶ ನೀಡಿದ್ದು, ಬಡಜನರಿಗೆ ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.ನೀರಿನ ಮಟ್ಟ ಕಡಿಮೆಯಾದ ಮೇಲೆ ನೀರಿನಿಂದ ಹರಡುವ ರೋಗಗಳು ಬರುವ ಸಾಧ್ಯತೆಯಿರುವುದರಿಂದ ಶುದ್ಧ ಕುಡಿಯುವ ನೀರು ಜನರಿಗೆ ಸಿಗುವಂತೆ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.