ಉಗ್ರನ ಹತ್ಯೆ ಬಗ್ಗೆ ಪಾಕ್ ನ ಅಭಿಪ್ರಾಯ ಉಗ್ರವಾದದ ಬಗ್ಗೆ ಅದರ ನಂಟಿಗೆ ಹಿಡಿದ ಕನ್ನಡಿ : ಭಾರತ

ಉಗ್ರನ ಹತ್ಯೆ ನಂತರ ಕಾಶ್ಮೀರ ಪರಿಸ್ಥಿತಿಯ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಭಾರತ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ಉಗ್ರನ ಹತ್ಯೆ ಬಗ್ಗೆ ಪಾಕ್ ನ ಅಭಿಪ್ರಾಯ ಉಗ್ರವಾದದ ಬಗ್ಗೆ ಅದರ ನಂಟಿಗೆ ಹಿಡಿದ ಕನ್ನಡಿ : ಭಾರತ
ಉಗ್ರನ ಹತ್ಯೆ ಬಗ್ಗೆ ಪಾಕ್ ನ ಅಭಿಪ್ರಾಯ ಉಗ್ರವಾದದ ಬಗ್ಗೆ ಅದರ ನಂಟಿಗೆ ಹಿಡಿದ ಕನ್ನಡಿ : ಭಾರತ

ನವದೆಹಲಿ: ಉಗ್ರನ ಹತ್ಯೆ ನಂತರ ಕಾಶ್ಮೀರ ಪರಿಸ್ಥಿತಿಯ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ವ್ಯಕ್ತಪಡಿಸಿರುವ ಅಭಿಪ್ರಾಯಕ್ಕೆ ಭಾರತ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ನಿಮ್ಮ ಅಭಿಪ್ರಾಯ ನೀವಿನ್ನೂ ಭಯೋತ್ಪಾದನೆಯೊಂದಿಗೆ ನಂಟು ಹೊಂದಿದ್ದೀರ ಎಂಬುದನ್ನು ಸೂಚಿಸುತ್ತದೆ ಎಂದು ತಿರುಗೇಟು ನೀಡಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಭಾರತ ಸರ್ಕಾರದ ಅಧಿಕೃತ ಹೇಳಿಕೆಯ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೆ ಮಾಡಿದ್ದು, ಉಗ್ರನ ಹತ್ಯೆ ನಂತರ ಪಾಕಿಸ್ತಾನ ವ್ಯಕ್ತಪಡಿಸಿರುವ ಅಭಿಪ್ರಾಯ, ಪಾಕಿಸ್ತಾನ ಇನ್ನು ಭಯೋತ್ಪಾದನೆಯೊಂದಿಗೆ ನಂಟು ಹೊಂದಿದೆ ಎಂಬುದನ್ನು ಬಿಂಬಿಸುತ್ತದೆ, ನೆರೆ ರಾಷ್ಟ್ರಗಳ ಆಂತರಿಕ ವಿಚಾರಗಳಿಂದ ಪಾಕಿಸ್ತಾನ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com