ಕಾಂಗ್ರೆಸ್ ನ ಗಿಮಿಕ್ ಉತ್ತರ ಪ್ರದೇಶದಲ್ಲಿ ಕೆಲಸ ಮಾಡುವುದಿಲ್ಲ: ಸಮಾಜವಾದಿ ಪಕ್ಷ

''27 ಸಾಲ್ ಯುಪಿ ಬೆಹಾಲ್'' ಎಂಬ ಘೋಷಣೆಯೊಂದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶನಿವಾರ ಚುನಾವಣಾ ಪ್ರಚಾರಕ್ಕೆ...
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಇಂದು ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಸೋನಿಯಾ ಗಾಂಧಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧ
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಇಂದು ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಿದ ಸೋನಿಯಾ ಗಾಂಧಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧ
ನವದೆಹಲಿ: ''27 ಸಾಲ್ ಯುಪಿ ಬೆಹಾಲ್'' ಎಂಬ ಘೋಷಣೆಯೊಂದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ಶನಿವಾರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿರುವ ಆಡಳಿತಾರೂಢ ಸಮಾಜವಾದಿ ಪಕ್ಷ, ಇಂತಹ ಗಿಮಿಕ್ ಗಳು ಕೆಲಸ ಮಾಡುವುದಿಲ್ಲ. ಕಳೆದ 60 ವರ್ಷಗಳಲ್ಲಿ ಅವರು ದೇಶಕ್ಕೆ ಏನು ಮಾಡಿದ್ದಾರೆ ಎಂದು ಮೊದಲು ದಾಖಲೆ ನೀಡಲಿ ಎಂದು ಸವಾಲೆಸೆದಿದೆ.
''ಕಾಂಗ್ರೆಸ್ ಪಕ್ಷ ಸುಮಾರು 60 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಆ ಸಮಯದಲ್ಲಿ ಅವರು ದೇಶವನ್ನು ಅಧೋಗತಿಯತ್ತ ಕೊಂಡೊಯ್ದರು. ಬೇರೆ ಪಕ್ಷಗಳಲ್ಲಿ ನೀವು ದೇಶಕ್ಕೆ ಏನು ಮಾಡಿದ್ದೀರಿ ಎಂದು ಲೆಕ್ಕ ಕೊಡಿ ಎಂದು ಕಾಂಗ್ರೆಸ್ ಕೇಳುತ್ತಿದೆ. ಆದರೆ ಅವರು 60 ವರ್ಷಗಳ ಕಾಲ ಅಧಿಕಾರದಲ್ಲಿದ್ದುಕೊಂಡು ದೇಶಕ್ಕೆ ಏನು ಮಾಡಿದರು ಎಂದು ಯಾವತ್ತೂ ಲೆಕ್ಕ ಕೊಡಲಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ರಾಜೇಂದ್ರ ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಆಳ್ವಿಕೆ ಸಂದರ್ಭದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ಇದೀಗ ಬೇರೆ ಪಕ್ಷಗಳಿಂದ ವಿವರಣೆ ಕೇಳುತ್ತಾರೆ. ಕಾಂಗ್ರೆಸ್ ನ ಈ ಟ್ರಿಕ್ ಗಳು ಕೆಲಸ ಮಾಡುವುದಿಲ್ಲ. ಎಷ್ಟೇ ಪ್ರಚಾರ ನಡೆಸಿದರೂ ಕೂಡ ಉತ್ತರ ಪ್ರದೇಶದ ಜನರಿಗೆ ವಾಸ್ತವ ಗೊತ್ತಿದೆ. ಕಾಂಗ್ರೆಸ್ ನ ಕುತಂತ್ರದ ಬಲೆಗೆ ಜನರು ಬೀಳುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com