ವೇದಾರಣ್ಯಂನ ಹತ್ತಿರ ಕಳ್ಳಿಮೇಡು ಎಂಬಲ್ಲಿ ಸುಮಾರು 200 ದಲಿತ ಕುಟುಂಬಗಳು, ತಮಗೆ ದೇವಸ್ಥಾನದ ಹಬ್ಬಗಳನ್ನು ಆಚರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಕರೂರಿನ ಮಲೈಕೊವಿಲೂರಿನ ಹತ್ತಿರ ನಾಗಂಪಲ್ಲಿ ಎಂಬಲ್ಲಿ 35ಕ್ಕೂ ಹೆಚ್ಚು ದಲಿತ ಕುಟುಂಬಗಳು ತಮ್ಮ ಮನೆ ಹತ್ತಿರವಿರುವ ಮಹಾಶಕ್ತಿ ಅಮ್ಮನ್ ದೇವಸ್ಥಾನಕ್ಕೆ ಪ್ರವೇಶಿಸ ನಿರಾಕರಿಸಲಾಗಿದೆ. ಈ ದೇವಾಲಯವನ್ನು ಕಟ್ಟಲು ನಾವು ಕೂಡ ಸಹಾಯ ಮಾಡಿದ್ದೇವೆ ಎನ್ನುತ್ತಾರೆ ಅವರು.