ಭಾರತೀಯ ದಂಡ ಸಂಹಿತೆ ಪ್ರಕಾರ ರೋನ್ನಿಗೆ ಹತ್ಯೆ, ಕೊಲೆ ಯತ್ನ, ರೈಲ್ವೆ ಕಾಯ್ದೆಯಡಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದಡಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಶ್ರಮ ಜೀವಿ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದಲ್ಲಿ 53 ಸಾಕ್ಷಿಗಳ ವಿಚಾರಣೆ ನಡೆದೆದೆ. ದೆಹಲಿಯಿಂದ ಪಾಟ್ನಾಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್ ಪ್ರೆಸ್ ರೈಲಿನಲ್ಲಿ ಲಖನೌ- ವಾರಾಣಸಿ ಮಾರ್ಗದಲ್ಲಿ 2005 ರ ಜು.28 ರಂದು ಸ್ಫೋಟ ಸಂಭವಿಸಿ 60 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದರು.