ದೆಹಲಿ ಮರ್ಸಿಡಿಸ್ ಹಿಟ್‌ ಆಂಡ್‌ ರನ್‌: ಆರೋಪಿ ವಯಸ್ಕನಂತೆ ವಿಚಾರಣೆಗೆ ಕೋರ್ಟ್ ಅಸ್ತು

ದೆಹಲಿಯ ಮರ್ಸಿಡಿಸ್‌ ಕಾರು ಹಿಟ್‌ ಆಂಡ್‌ ರನ್‌ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ...
ಅಪಘಾತ ದೃಶ್ಯ
ಅಪಘಾತ ದೃಶ್ಯ
ನವದೆಹಲಿ: ದೆಹಲಿಯ ಮರ್ಸಿಡಿಸ್‌ ಕಾರು ಹಿಟ್‌ ಆಂಡ್‌ ರನ್‌ ಪ್ರಕರಣದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ವಯಸ್ಕನಂತೆ ವಿಚಾರಣೆಗೆ ಒಳಪಡಿಸುವುದಕ್ಕೆ ಬಾಲ ನ್ಯಾಯಮಂಡಳಿ ಶನಿವಾರ ಒಪ್ಪಿಗೆ ನೀಡಿದೆ. 
ಅಪಘಾತದ ವೇಳೆ ಆರೋಪಿಗೆ 18 ವರ್ಷ ತುಂಬುವುದಕ್ಕೆ ಕೇವಲ ನಾಲ್ಕು ದಿನ ಮಾತ್ರ ಬಾಕಿ ಇತ್ತು. ಹೀಗಾಗಿ ಆರೋಪಿಯನ್ನು ವಯಸ್ಕನಂತೆ ಪರಿಗಣಿಸಿ ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ ಮನವಿಯನ್ನು ಬಾಲ ನ್ಯಾಯ ಮಂಡಳಿಯು ಇಂದು ಪುರಸ್ಕರಿಸಿದೆ.
ಕಳೆದ ಎಪ್ರಿಲ್‌ 4ರಂದು ಅಪ್ರಾಪ್ತ ಬಾಲಕನೊಬ್ಬ ನುಮರ್ಸಿಡಿಸ್‌ ವೇಗವಾಗಿ ಚಲಾಯಿಸಿ 32ರ ಹರೆಯದ ಉದ್ಯಮಿ ಸಿದ್ಧಾರ್ಥ ಶರ್ಮಾ ಎಂಬವರ ಮೇಲೆ ಹರಿಸಿ ಅವರ ಸಾವಿಗೆ ಕಾರಣನಾಗಿದ್ದ.
ಮೇ 26ರಂದು ದೆಹಲಿ ಪೊಲೀಸರು ಆರೋಪಿಯ ವಿರುದ್ಧ ಕೊಲೆಯಲ್ಲದ ನರಹತ್ಯೆ ಆರೋಪವನ್ನು ಹೊರಿಸಿ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಜತೆಗೆ ಆರೋಪಿಯ ತಂದೆ ಹಾಗೂ ಕುಟುಂಬದ ವಾಹನ ಚಾಲಕನ ವಿರುದ್ಧ ಚಾರ್ಜ್‌ ಶೀಟ್‌ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com